<p><strong>ಭದ್ರಾವತಿ: </strong>ನೀರಿಗಾಗಿ, ಪಡಿತರಕ್ಕಾಗಿ, ಆಧಾರ್, ರೇಷನ್ಕಾರ್ಡ್ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯ. ಆದರೆ, ಆಸ್ತಿ ನೋಂದಣಿಗೆ ಬೆಳಗಿನ ಜಾವದಿಂದ ಸರದಿ ಸಾಲಿನಲ್ಲಿ ನಿಲ್ಲುವ ಮಂದಿಯನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ...<br /> <br /> ಹೌದು ! ಇಲ್ಲಿನ ಮಿನಿವಿಧಾನಸೌಧ ಹಿಂಭಾಗದಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ ಪ್ರತಿದಿನ ಸರದಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.<br /> <br /> ಕಂಪ್ಯೂಟರೀಕೃತ ನೋಂದಣಿ ಕಾರ್ಯದಲ್ಲಿ ವಿಳಂಬ, ಸರಿಯಾದ ವ್ಯವಸ್ಥೆ ಇಲ್ಲದ ಹಾಗೂ ಇನ್ನಿತರ ಅವ್ಯವಸ್ಥೆಗಳ ಕಾರಣ ಸದ್ಯಕ್ಕೆ ಆಸ್ತಿ ನೋಂದಣಿ ಮಾಡಿಸಲು ಬೆಳಗಿನ ಜಾವವೇ ಬಂದು ಜಾಗ ಹಿಡಿಯುವ ಸ್ಥಿತಿ ಇಲ್ಲಿ ಅನಿವಾರ್ಯವಾಗಿದೆ.<br /> <br /> ಈಚೆಗೆ ಗ್ರಾಮ ಪಂಚಾಯ್ತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿ ಮಂಜೂರಾತಿ ನೋಂದಣಿ ಕಾರ್ಯಕ್ಕೆ ಸರ್ಕಾರ ಅನುಮತಿ ನೀಡಿದ ನಂತರ ದೈನಂದಿನ ಕೆಲಸ ಹೆಚ್ಚಾಗಿ ಈ ಕಚೇರಿಯ ಮುಂದೆ ಈಗ ಜನದಟ್ಟಣೆಯ ಹೆಚ್ಚಿದೆ.<br /> <br /> ಸಾಲಲ್ಲಿ ನಿಂತರೂ ಎಷ್ಟೋ ಸಲ ಕಚೇರಿ ಅವಧಿ ಮುಗಿದು, ಗೊಣಗುತ್ತಲೇ ಮಾರನೇ ದಿನಕ್ಕೆ ಕ್ರಮಸಂಖ್ಯೆ ಚೀಟಿ ಪಡೆದು ನೋಂದಣಿ ಮಾಡಿಸಿಕೊಂಡಿರುವವರ ಜನರ ಸಾಕಷ್ಟು ಉದಾಹರಣೆಗಳು ಇಲ್ಲಿ ಸಾಮಾನ್ಯ.<br /> <br /> ಕಚೇರಿಯಲ್ಲಿ ಬಳಕೆ ಮಾಡುತ್ತಿರುವ ಹಳೇ ಕಂಪ್ಯೂಟರ್, ಸ್ಕ್ಯಾನಿಂಗ್ ಹಾಗೂ ಇನ್ನಿತರ ಉಪಕರಣದಿಂದ ನೋಂದಣಿ ವಿಳಂಬತೆ ಹಾದಿ ಹಿಡಿದಿದೆ. ಇದನ್ನು ಸರಿ ಮಾಡುವ ನಿಟ್ಟಿನಲ್ಲಿ ಏಜೆನ್ಸಿ ಬದಲಿಸಿದರೂ ಸಹ ಅವರು ಹೊಸ ವ್ಯವಸ್ಥೆ ಕಲ್ಪಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರುತ್ತಾರೆ ಸಾರ್ವಜನಿಕರು.<br /> <br /> ನೋಂದಣಿ ಕುರಿತಾಗಿ ಸಂಪೂರ್ಣ ಮಾಹಿತಿ ನೀಡುವ ‘ಕಿಯೋಸ್ಕ್’ ಯಂತ್ರ ಇದ್ದರೂ, ಅದು ಕೆಲಸ ನಿರ್ವಹಿಸದೆ ವಿಫಲವಾಗಿದೆ. ಇಲ್ಲಿಗೆ ಬರುವ ನಾಗರಿಕರಿಗೆ ನೋಂದಣಿ ಶುಲ್ಕ ಮಾಹಿತಿಯ ಯಾವುದೇ ಫಲಕ ಪ್ರದರ್ಶಿಸದಿರುವುದು ಸಹ ಸಾಕಷ್ಟು ಗೊಂದಲ<br /> ಸೃಷ್ಟಿಸಿದೆ.<br /> <br /> ಇದೆಲ್ಲದರ ಜತೆಗೆ ಋಣರಾಹಿತ್ಯ ಪ್ರಮಾಣಪತ್ರ ಪಡೆಯಲು ಸಾಕಷ್ಟು ಬೇಡಿಕೆ ಇದ್ದು, ಇದರ ವಿಳಂಬತೆಗೂ ಅಲ್ಲಿನ ಯಂತ್ರೋಪಕರಣ ಬಳಕೆಯಲ್ಲಿನ ದೋಷ ಕಾರಣ ಎಂಬುದು ಸಾರ್ವಜನಿಕರ ದೂರು.<br /> <br /> <strong>ಮೂಲ ಸೌಕರ್ಯ ಕೊರತೆ</strong><br /> ಅಲ್ಲಿಗೆ ಬರುವ ನಾಗರಿಕರಿಗೆ ಕೂರಲು ಕುರ್ಚಿ, ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವ ಕಾರಣ ಗಂಟೆಗಟ್ಟಲೆ ಹೊರಗಡೆ ಬಿಸಿಲಿನಲ್ಲಿ ಕಾಯುವ ಸ್ಥಿತಿ ಇದೆ.<br /> <br /> ಈ ಧೋರಣೆ ಖಂಡಿಸಿ ಈಚೆಗೆ ರೈತಸಂಘದ ಮುಖಂಡರು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ, ಇಲ್ಲಿನ ವ್ಯವಸ್ಥೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗದಿರುವುದು ಜನರ ಆಕ್ರೋಶಕ್ಕೆ<br /> ಕಾರಣವಾಗಿದೆ.<br /> <br /> ಇದಲ್ಲದೆ, ಶುಲ್ಕಪಟ್ಟಿ ಪ್ರದರ್ಶನ ಇಲ್ಲದಿರುವುದು, ಸ್ಕ್ಯಾನಿಂಗ್ ವಿಷಯವಾಗಿ ತೆಗೆದುಕೊಳ್ಳುವ ದರ ಕುರಿತಾಗಿ ಮಾಹಿತಿ ಫಲಕ ಪ್ರದರ್ಶಿಸದಿರುವುದು ಸಹ ಅಲ್ಲಿಗೆ ಬರುವ ಜನರ ಪಾಲಿಗೆ ಸಾಕಷ್ಟು ತಲೆನೋವು ತರುವ ಸಂಗತಿಯಾಗಿದೆ.<br /> <br /> ಒಟ್ಟಿನಲ್ಲಿ, ನೋಂದಣಿ ಮಾಡಿಸಿಕೊಳ್ಳಲು ಸಹ ಜನರು ಕ್ರಮಸಂಖ್ಯೆ ಪಡೆಯುವ ಸ್ಥಿತಿ ಎದುರಾಗಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕಾರಣ ಎಂಬುದು ಸಾರ್ವಜನಿಕರ ಆರೋಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ: </strong>ನೀರಿಗಾಗಿ, ಪಡಿತರಕ್ಕಾಗಿ, ಆಧಾರ್, ರೇಷನ್ಕಾರ್ಡ್ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯ. ಆದರೆ, ಆಸ್ತಿ ನೋಂದಣಿಗೆ ಬೆಳಗಿನ ಜಾವದಿಂದ ಸರದಿ ಸಾಲಿನಲ್ಲಿ ನಿಲ್ಲುವ ಮಂದಿಯನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ...<br /> <br /> ಹೌದು ! ಇಲ್ಲಿನ ಮಿನಿವಿಧಾನಸೌಧ ಹಿಂಭಾಗದಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ ಪ್ರತಿದಿನ ಸರದಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.<br /> <br /> ಕಂಪ್ಯೂಟರೀಕೃತ ನೋಂದಣಿ ಕಾರ್ಯದಲ್ಲಿ ವಿಳಂಬ, ಸರಿಯಾದ ವ್ಯವಸ್ಥೆ ಇಲ್ಲದ ಹಾಗೂ ಇನ್ನಿತರ ಅವ್ಯವಸ್ಥೆಗಳ ಕಾರಣ ಸದ್ಯಕ್ಕೆ ಆಸ್ತಿ ನೋಂದಣಿ ಮಾಡಿಸಲು ಬೆಳಗಿನ ಜಾವವೇ ಬಂದು ಜಾಗ ಹಿಡಿಯುವ ಸ್ಥಿತಿ ಇಲ್ಲಿ ಅನಿವಾರ್ಯವಾಗಿದೆ.<br /> <br /> ಈಚೆಗೆ ಗ್ರಾಮ ಪಂಚಾಯ್ತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿ ಮಂಜೂರಾತಿ ನೋಂದಣಿ ಕಾರ್ಯಕ್ಕೆ ಸರ್ಕಾರ ಅನುಮತಿ ನೀಡಿದ ನಂತರ ದೈನಂದಿನ ಕೆಲಸ ಹೆಚ್ಚಾಗಿ ಈ ಕಚೇರಿಯ ಮುಂದೆ ಈಗ ಜನದಟ್ಟಣೆಯ ಹೆಚ್ಚಿದೆ.<br /> <br /> ಸಾಲಲ್ಲಿ ನಿಂತರೂ ಎಷ್ಟೋ ಸಲ ಕಚೇರಿ ಅವಧಿ ಮುಗಿದು, ಗೊಣಗುತ್ತಲೇ ಮಾರನೇ ದಿನಕ್ಕೆ ಕ್ರಮಸಂಖ್ಯೆ ಚೀಟಿ ಪಡೆದು ನೋಂದಣಿ ಮಾಡಿಸಿಕೊಂಡಿರುವವರ ಜನರ ಸಾಕಷ್ಟು ಉದಾಹರಣೆಗಳು ಇಲ್ಲಿ ಸಾಮಾನ್ಯ.<br /> <br /> ಕಚೇರಿಯಲ್ಲಿ ಬಳಕೆ ಮಾಡುತ್ತಿರುವ ಹಳೇ ಕಂಪ್ಯೂಟರ್, ಸ್ಕ್ಯಾನಿಂಗ್ ಹಾಗೂ ಇನ್ನಿತರ ಉಪಕರಣದಿಂದ ನೋಂದಣಿ ವಿಳಂಬತೆ ಹಾದಿ ಹಿಡಿದಿದೆ. ಇದನ್ನು ಸರಿ ಮಾಡುವ ನಿಟ್ಟಿನಲ್ಲಿ ಏಜೆನ್ಸಿ ಬದಲಿಸಿದರೂ ಸಹ ಅವರು ಹೊಸ ವ್ಯವಸ್ಥೆ ಕಲ್ಪಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರುತ್ತಾರೆ ಸಾರ್ವಜನಿಕರು.<br /> <br /> ನೋಂದಣಿ ಕುರಿತಾಗಿ ಸಂಪೂರ್ಣ ಮಾಹಿತಿ ನೀಡುವ ‘ಕಿಯೋಸ್ಕ್’ ಯಂತ್ರ ಇದ್ದರೂ, ಅದು ಕೆಲಸ ನಿರ್ವಹಿಸದೆ ವಿಫಲವಾಗಿದೆ. ಇಲ್ಲಿಗೆ ಬರುವ ನಾಗರಿಕರಿಗೆ ನೋಂದಣಿ ಶುಲ್ಕ ಮಾಹಿತಿಯ ಯಾವುದೇ ಫಲಕ ಪ್ರದರ್ಶಿಸದಿರುವುದು ಸಹ ಸಾಕಷ್ಟು ಗೊಂದಲ<br /> ಸೃಷ್ಟಿಸಿದೆ.<br /> <br /> ಇದೆಲ್ಲದರ ಜತೆಗೆ ಋಣರಾಹಿತ್ಯ ಪ್ರಮಾಣಪತ್ರ ಪಡೆಯಲು ಸಾಕಷ್ಟು ಬೇಡಿಕೆ ಇದ್ದು, ಇದರ ವಿಳಂಬತೆಗೂ ಅಲ್ಲಿನ ಯಂತ್ರೋಪಕರಣ ಬಳಕೆಯಲ್ಲಿನ ದೋಷ ಕಾರಣ ಎಂಬುದು ಸಾರ್ವಜನಿಕರ ದೂರು.<br /> <br /> <strong>ಮೂಲ ಸೌಕರ್ಯ ಕೊರತೆ</strong><br /> ಅಲ್ಲಿಗೆ ಬರುವ ನಾಗರಿಕರಿಗೆ ಕೂರಲು ಕುರ್ಚಿ, ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವ ಕಾರಣ ಗಂಟೆಗಟ್ಟಲೆ ಹೊರಗಡೆ ಬಿಸಿಲಿನಲ್ಲಿ ಕಾಯುವ ಸ್ಥಿತಿ ಇದೆ.<br /> <br /> ಈ ಧೋರಣೆ ಖಂಡಿಸಿ ಈಚೆಗೆ ರೈತಸಂಘದ ಮುಖಂಡರು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ, ಇಲ್ಲಿನ ವ್ಯವಸ್ಥೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗದಿರುವುದು ಜನರ ಆಕ್ರೋಶಕ್ಕೆ<br /> ಕಾರಣವಾಗಿದೆ.<br /> <br /> ಇದಲ್ಲದೆ, ಶುಲ್ಕಪಟ್ಟಿ ಪ್ರದರ್ಶನ ಇಲ್ಲದಿರುವುದು, ಸ್ಕ್ಯಾನಿಂಗ್ ವಿಷಯವಾಗಿ ತೆಗೆದುಕೊಳ್ಳುವ ದರ ಕುರಿತಾಗಿ ಮಾಹಿತಿ ಫಲಕ ಪ್ರದರ್ಶಿಸದಿರುವುದು ಸಹ ಅಲ್ಲಿಗೆ ಬರುವ ಜನರ ಪಾಲಿಗೆ ಸಾಕಷ್ಟು ತಲೆನೋವು ತರುವ ಸಂಗತಿಯಾಗಿದೆ.<br /> <br /> ಒಟ್ಟಿನಲ್ಲಿ, ನೋಂದಣಿ ಮಾಡಿಸಿಕೊಳ್ಳಲು ಸಹ ಜನರು ಕ್ರಮಸಂಖ್ಯೆ ಪಡೆಯುವ ಸ್ಥಿತಿ ಎದುರಾಗಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕಾರಣ ಎಂಬುದು ಸಾರ್ವಜನಿಕರ ಆರೋಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>