ಗ್ರಾಮದ ಕೋಟ್ರಂಗಡ ಬಿದ್ದಪ್ಪ ಅವರ ಲೈನ್ಮನೆಯಲ್ಲಿ, ತಂದೆ ಪಣಿ ಯರವರ ಬಸವ ಅವರೊಂದಿಗೆ ವಾಸವಾಗಿದ್ದ ಅಯ್ಯಪ್ಪ, ಶ್ರೀಮಂಗಲದ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ. ಸೌದೆ ತರಲೆಂದು ಹೋಗಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಕೊಟ್ರಂಗಡ ಅಶ್ವಥ್ ಅವರ ತೋಟದಲ್ಲಿಮೃತದೇಹ ಪತ್ತೆಯಾಗಿದೆ. ಹುಲಿಯ ಕೂದಲು ಮೃತದೇಹದ ಮೇಲೆ ಬಿದ್ದಿದ್ದಾಗಿ ಎಂದು ಸ್ಥಳೀಯರು ತಿಳಿಸಿದ್ದಾರೆ.