ಕಂದಾಯ ಭವನವು ದಶಕದ ಕಾಲ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಾಗಿ ಬಳಕೆಯಾಗಿದ್ದ ಸಂದರ್ಭ ಇದೇ ಅರಳೀಮರವು ಅದೆಷ್ಟೋ ಮಂದಿಗೆ ನೆರಳು ನೀಡಿ ಸಲಹಿತ್ತು. ಸರ್ಕಾರಿ ಕಚೇರಿಗಳಿಗೆ ಬಂದ ಹಿರಿಯರು, ಮಕ್ಕಳು, ಮಹಿಳೆಯರು ಇದೇ ಮರದ ನೆರಳಿನಲ್ಲಿ ವಿಶ್ರಮಿಸುತ್ತಿದ್ದರು. ಮರದ ಸುತ್ತ ಕಟ್ಟೆ ಕಟ್ಟಿದ್ದು, ಅಲ್ಲಿ ಅದೆಷ್ಟೋ ಮಂದಿ ಬುತ್ತಿ ಬಿಚ್ಚಿ ಮನೆಯೂಟದ ಸವಿ ಉಣ್ಣುತ್ತ ದಣಿವು ತೀರಿಸಿಕೊಂಡಿದ್ದೂ ಉಂಟು.