<p>ಶಿರಾ: 2016-17ನೇ ಸಾಲಿಗೆ ನಗರಸಭೆಯಿಂದ ₹ 56.50 ಲಕ್ಷ ಉಳಿತಾಯ ಬಜೆಟ್ ಅನ್ನು ಉಪಾಧ್ಯಕ್ಷ ಇಸ್ಮಾಯಿಲ್ ಬೇಗ್ ಮಂಡಿಸಿದರು.<br /> ನಗರಸಭೆ ಅಧ್ಯಕ್ಷೆ ಜ್ಞಾನಪೂರ್ಣ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಇಸ್ಮಾಯಿಲ್ ಬೇಗ್ ಒಟ್ಟಾರೆ ₹ 24.31 ಕೋಟಿ ಬಜೆಟ್ ಮಂಡಿಸಿದರು.<br /> <br /> ₹ 23.74 ಕೋಟಿ ಖರ್ಚು ಅಂದಾಜಿಸಿದ್ದು, ₹ 56.50 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.<br /> ಕಂದಾಯದಲ್ಲಿ ಆಸ್ತಿ ತೆರಿಗೆ ಸೇರಿ ₹ 1.60 ಕೋಟಿ, ನೀರಿನ ಕರ ₹ 1.28 ಕೋಟಿ, ಕಟ್ಟಡಗಳ ಬಾಡಿಗೆ ₹ 35 ಲಕ್ಷ, ವೇತನ ಅನುದಾನ ₹ 4.5 ಕೋಟಿ ಮತ್ತಿತರೆ ಆದಾಯ ಮೂಲಗಳು ಇವೆ.<br /> <br /> ಇನ್ನು ಕಂದಾಯ ಪಾವತಿ ₹ 10.60 ಕೋಟಿ, ಬಂಡವಾಳ ಪಾವತಿ ₹ 10.45 ಕೋಟಿ ಮತ್ತಿತರ ಬಾಬ್ತು ಖರ್ಚಿನಲ್ಲಿ ಸೇರಿದೆ.<br /> ವೇತನಕ್ಕೆ ಸಿಂಹ ಪಾಲು: ನಗರಸಭೆ ಆದಾಯದಲ್ಲಿ ಸಿಂಹ ಪಾಲು ಸಿಬ್ಬಂದಿ ವೇತನ ಹಾಗೂ ಭತ್ಯೆಗಳಿಗೆ (₹ 4 ಕೋಟಿ) ಹೋಗಲಿದೆ. ವಿದ್ಯುತ್ ಮತ್ತು ಇಂಧನಕ್ಕೆ ₹ 1.80 ಕೋಟಿ, ವಾಹನ ಖರೀದಿಗೆ ₹ 30 ಲಕ್ಷ, ರಸ್ತೆಗಳಿಗಾಗಿ ₹ 4 ಕೋಟಿ, ಚರಂಡಿ– ಸೇತುವೆಗಳಿಗೆ ₹ 1.75 ಕೋಟಿ, ಪೈಪ್ಲೈನ್ಗೆ ₹ 2.10 ಕೋಟಿ, ಬೀದಿ ದೀಪಗಳ ನಿರ್ವಹಣೆಗೆ ₹ 1 ಕೋಟಿ ಮೀಸಲಿರಿಸಲಾಗಿದೆ.<br /> <br /> ವಿರೋಧ ಪಕ್ಷದವರು ಬಜೆಟ್ಗೆ ಯಾವುದೇ ಚಕಾರ ಎತ್ತದೆ, 5 ನಿಮಿಷದಲ್ಲಿ ಅನುಮೋದನೆ ದೊರೆಯಿತು.<br /> ಕಳೆದ ಬಾರಿ ರಸ್ತೆಗಳಿಗಾಗಿ ₹ 8 ಕೋಟಿ ತೆಗೆದಿರಿಸಲಾಗಿತ್ತು. ಆದರೆ ಈ ಬಾರಿ ₹ 4 ಕೋಟಿ ಮೀಸಲಿಡಲಾಗಿದೆ. ಆದರೂ ಬಜೆಟ್ಗೆ ಯಾವುದೇ ತಕರಾರು ವ್ಯಕ್ತವಾಗಲಿಲ್ಲ.<br /> <br /> ನಗರಸಭೆ ಪೌರಾಯುಕ್ತ ಯೋಗಾನಂದ್, ಸ್ಥಾಯಿ ಸಮಿತಿ ಸದಸ್ಯ ಶ್ರೀನಿವಾಸ್ ಗುಪ್ತ, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.<br /> <br /> <strong>ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸಗುಪ್ತ ಆಯ್ಕೆ</strong><br /> ಶಿರಾ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಸ್.ಆರ್.ಶ್ರೀನಿವಾಸಗುಪ್ತ (ವಾಸು) ಬುಧವಾರ ಅವಿರೋಧವಾಗಿ ಆಯ್ಕೆಯಾದರು.</p>.<p>ನಗರಸಭೆಯ 29ನೇ ವಾರ್ಡ್ನಿಂದ ಕಾಂಗ್ರೆಸ್ನಿಂದ ಆಯ್ಕೆಯಾಗಿರುವ ಅವರನ್ನು ನಗರಸಭೆಯ ಆಯವ್ಯಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.<br /> ಸಭೆ ಪ್ರಾರಂಭ ಆಗುತ್ತಿದ್ದಂತೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸಗುಪ್ತ ಅವರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಅಧ್ಯಕ್ಷರು ಘೋಷಣೆ ಮಾಡಿದರು. ಏನು ನಡೆಯುತ್ತಿದೆ ಎಂಬುದು ಆರ್ಥವಾಗುವ ಮೊದಲೇ ಕಾಂಗ್ರೆಸ್ ಸದಸ್ಯರು ಬೆಂಬಲ ಸೂಚಿಸಿ, ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ಘೋಷಣೆ ಮಾಡಲಾಯಿತು.<br /> <br /> ಆ ನಂತರ ಕೆಲ ಸದಸ್ಯರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದರು. ಬಜೆಟ್ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಬದಲು ಬೇರೆ ಸಭೆ ಕರೆಯಬೇಕಿತ್ತು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಾ: 2016-17ನೇ ಸಾಲಿಗೆ ನಗರಸಭೆಯಿಂದ ₹ 56.50 ಲಕ್ಷ ಉಳಿತಾಯ ಬಜೆಟ್ ಅನ್ನು ಉಪಾಧ್ಯಕ್ಷ ಇಸ್ಮಾಯಿಲ್ ಬೇಗ್ ಮಂಡಿಸಿದರು.<br /> ನಗರಸಭೆ ಅಧ್ಯಕ್ಷೆ ಜ್ಞಾನಪೂರ್ಣ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಇಸ್ಮಾಯಿಲ್ ಬೇಗ್ ಒಟ್ಟಾರೆ ₹ 24.31 ಕೋಟಿ ಬಜೆಟ್ ಮಂಡಿಸಿದರು.<br /> <br /> ₹ 23.74 ಕೋಟಿ ಖರ್ಚು ಅಂದಾಜಿಸಿದ್ದು, ₹ 56.50 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.<br /> ಕಂದಾಯದಲ್ಲಿ ಆಸ್ತಿ ತೆರಿಗೆ ಸೇರಿ ₹ 1.60 ಕೋಟಿ, ನೀರಿನ ಕರ ₹ 1.28 ಕೋಟಿ, ಕಟ್ಟಡಗಳ ಬಾಡಿಗೆ ₹ 35 ಲಕ್ಷ, ವೇತನ ಅನುದಾನ ₹ 4.5 ಕೋಟಿ ಮತ್ತಿತರೆ ಆದಾಯ ಮೂಲಗಳು ಇವೆ.<br /> <br /> ಇನ್ನು ಕಂದಾಯ ಪಾವತಿ ₹ 10.60 ಕೋಟಿ, ಬಂಡವಾಳ ಪಾವತಿ ₹ 10.45 ಕೋಟಿ ಮತ್ತಿತರ ಬಾಬ್ತು ಖರ್ಚಿನಲ್ಲಿ ಸೇರಿದೆ.<br /> ವೇತನಕ್ಕೆ ಸಿಂಹ ಪಾಲು: ನಗರಸಭೆ ಆದಾಯದಲ್ಲಿ ಸಿಂಹ ಪಾಲು ಸಿಬ್ಬಂದಿ ವೇತನ ಹಾಗೂ ಭತ್ಯೆಗಳಿಗೆ (₹ 4 ಕೋಟಿ) ಹೋಗಲಿದೆ. ವಿದ್ಯುತ್ ಮತ್ತು ಇಂಧನಕ್ಕೆ ₹ 1.80 ಕೋಟಿ, ವಾಹನ ಖರೀದಿಗೆ ₹ 30 ಲಕ್ಷ, ರಸ್ತೆಗಳಿಗಾಗಿ ₹ 4 ಕೋಟಿ, ಚರಂಡಿ– ಸೇತುವೆಗಳಿಗೆ ₹ 1.75 ಕೋಟಿ, ಪೈಪ್ಲೈನ್ಗೆ ₹ 2.10 ಕೋಟಿ, ಬೀದಿ ದೀಪಗಳ ನಿರ್ವಹಣೆಗೆ ₹ 1 ಕೋಟಿ ಮೀಸಲಿರಿಸಲಾಗಿದೆ.<br /> <br /> ವಿರೋಧ ಪಕ್ಷದವರು ಬಜೆಟ್ಗೆ ಯಾವುದೇ ಚಕಾರ ಎತ್ತದೆ, 5 ನಿಮಿಷದಲ್ಲಿ ಅನುಮೋದನೆ ದೊರೆಯಿತು.<br /> ಕಳೆದ ಬಾರಿ ರಸ್ತೆಗಳಿಗಾಗಿ ₹ 8 ಕೋಟಿ ತೆಗೆದಿರಿಸಲಾಗಿತ್ತು. ಆದರೆ ಈ ಬಾರಿ ₹ 4 ಕೋಟಿ ಮೀಸಲಿಡಲಾಗಿದೆ. ಆದರೂ ಬಜೆಟ್ಗೆ ಯಾವುದೇ ತಕರಾರು ವ್ಯಕ್ತವಾಗಲಿಲ್ಲ.<br /> <br /> ನಗರಸಭೆ ಪೌರಾಯುಕ್ತ ಯೋಗಾನಂದ್, ಸ್ಥಾಯಿ ಸಮಿತಿ ಸದಸ್ಯ ಶ್ರೀನಿವಾಸ್ ಗುಪ್ತ, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.<br /> <br /> <strong>ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸಗುಪ್ತ ಆಯ್ಕೆ</strong><br /> ಶಿರಾ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಸ್.ಆರ್.ಶ್ರೀನಿವಾಸಗುಪ್ತ (ವಾಸು) ಬುಧವಾರ ಅವಿರೋಧವಾಗಿ ಆಯ್ಕೆಯಾದರು.</p>.<p>ನಗರಸಭೆಯ 29ನೇ ವಾರ್ಡ್ನಿಂದ ಕಾಂಗ್ರೆಸ್ನಿಂದ ಆಯ್ಕೆಯಾಗಿರುವ ಅವರನ್ನು ನಗರಸಭೆಯ ಆಯವ್ಯಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.<br /> ಸಭೆ ಪ್ರಾರಂಭ ಆಗುತ್ತಿದ್ದಂತೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸಗುಪ್ತ ಅವರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಅಧ್ಯಕ್ಷರು ಘೋಷಣೆ ಮಾಡಿದರು. ಏನು ನಡೆಯುತ್ತಿದೆ ಎಂಬುದು ಆರ್ಥವಾಗುವ ಮೊದಲೇ ಕಾಂಗ್ರೆಸ್ ಸದಸ್ಯರು ಬೆಂಬಲ ಸೂಚಿಸಿ, ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ಘೋಷಣೆ ಮಾಡಲಾಯಿತು.<br /> <br /> ಆ ನಂತರ ಕೆಲ ಸದಸ್ಯರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದರು. ಬಜೆಟ್ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಬದಲು ಬೇರೆ ಸಭೆ ಕರೆಯಬೇಕಿತ್ತು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>