‘ಸಾಹಿತ್ಯ ಜೋಳಿಗೆ, ವಿವಿಧ ಇಲಾಖೆಗಳು, ದಾನಿಗಳಿಂದ ₹2.93 ಲಕ್ಷ ಸಂಗ್ರಹವಾಗಿತ್ತು. ಖೋತಾ ಆಗಿರುವ ₹2.32 ಲಕ್ಷದಲ್ಲಿ ₹1.14 ಲಕ್ಷ ಮೊತ್ತವು ಕೇಂದ್ರ ಸಾಹಿತ್ಯ ಪರಿಷತ್ ಸೇರಿದಂತೆ ಮತ್ತಿತರ ಮೂಲಗಳಿಂದ ಬರುವ ನಿರೀಕ್ಷೆ ಇದೆ. ಇನ್ನುಳಿದ ಮೊತ್ತವನ್ನು ನಾವೇ ಭರಿಸಬೇಕಿದೆ’ ಎಂದು ಪರಿಷತ್ ಅಧ್ಯಕ್ಷ ಎಂ.ಎಸ್. ರವಿಕಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.