<p><strong>ಹುಲಿಯೂರುದುರ್ಗ</strong>: ‘ರಾಜ್ಯದ ರೇಷ್ಮೆ ಬೆಳೆಗಾರರು ಇಲಾಖೆಯಿಂದ ದೊರೆಯುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವುದರ ಜತೆಗೆ ಆಧುನಿಕ ವ್ಯವಸಾಯ ಕ್ರಮಗಳನ್ನು ಅನುಸರಿಸಿ ದೇಶದ ರೇಷ್ಮೆ ಉತ್ಪಾದನೆಗೆ ಸ್ವಾವಲಂಬನೆಯ ಹರಿಕಾರರಾಗ ಬೇಕಿದೆ’ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.</p>.<p>ಪಟ್ಟಣದ ಹುಲಿಯೂರಮ್ಮ ಸಮುದಾಯ ಭವನದಲ್ಲಿ ನಡೆದ ರೇಷ್ಮೆ ಗೂಡು ಬೆಳೆಗಾರರ ತರಬೇತಿ ಕಾರ್ಯಾಗಾರ ಹಾಗೂ ಬೀಜಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಆರ್ಥಿಕ ಬೆಳೆಯಾಗಿ ರೇಷ್ಮೆ ಕೃಷಿ ಹೆಚ್ಚು ಲಾಭದಾಯಕ ಉದ್ಯಮ. ಇದರ ವಿಸ್ತರಣೆಗೆ ರೈತರು ಮುಂದಾಗಬೇಕು. ಕಡಿಮೆ ಪ್ರಮಾಣದ ನೀರು ಬಳಕೆಗೆ ಪೂರಕವಾಗಿ ಮರಕಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯ ಬೇಕು’ ಎಂದು ಅವರು ಹೇಳಿದರು.</p>.<p>ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಡಾ.ಆರ್.ಕೆ.ಮಿಶ್ರ, ವಿಸ್ತರಣಾ ವಿಜ್ಞಾನಿ ಡಾ.ಕೆ.ವೇದವ್ಯಾಸ, ಡಾ.ಸುಧಾಕರ್ ರಾವ್, ಡಾ.ಚಂದ್ರಶೇಖರ ಹೆಗಡೆ, ತಾಲ್ಲೂಕು ಜಂಟಿ ನಿರ್ದೇಶಕ ಎಂ.ವಿ.ಚಂದ್ರು, ಸಹಾಯಕ ನಿರ್ದೇಶಕ ರಮೇಶ್ ಹಾಗೂ ವಿನಾಯಕ ಹೊಸಮನಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಿಯೂರುದುರ್ಗ</strong>: ‘ರಾಜ್ಯದ ರೇಷ್ಮೆ ಬೆಳೆಗಾರರು ಇಲಾಖೆಯಿಂದ ದೊರೆಯುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವುದರ ಜತೆಗೆ ಆಧುನಿಕ ವ್ಯವಸಾಯ ಕ್ರಮಗಳನ್ನು ಅನುಸರಿಸಿ ದೇಶದ ರೇಷ್ಮೆ ಉತ್ಪಾದನೆಗೆ ಸ್ವಾವಲಂಬನೆಯ ಹರಿಕಾರರಾಗ ಬೇಕಿದೆ’ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.</p>.<p>ಪಟ್ಟಣದ ಹುಲಿಯೂರಮ್ಮ ಸಮುದಾಯ ಭವನದಲ್ಲಿ ನಡೆದ ರೇಷ್ಮೆ ಗೂಡು ಬೆಳೆಗಾರರ ತರಬೇತಿ ಕಾರ್ಯಾಗಾರ ಹಾಗೂ ಬೀಜಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಆರ್ಥಿಕ ಬೆಳೆಯಾಗಿ ರೇಷ್ಮೆ ಕೃಷಿ ಹೆಚ್ಚು ಲಾಭದಾಯಕ ಉದ್ಯಮ. ಇದರ ವಿಸ್ತರಣೆಗೆ ರೈತರು ಮುಂದಾಗಬೇಕು. ಕಡಿಮೆ ಪ್ರಮಾಣದ ನೀರು ಬಳಕೆಗೆ ಪೂರಕವಾಗಿ ಮರಕಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯ ಬೇಕು’ ಎಂದು ಅವರು ಹೇಳಿದರು.</p>.<p>ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಡಾ.ಆರ್.ಕೆ.ಮಿಶ್ರ, ವಿಸ್ತರಣಾ ವಿಜ್ಞಾನಿ ಡಾ.ಕೆ.ವೇದವ್ಯಾಸ, ಡಾ.ಸುಧಾಕರ್ ರಾವ್, ಡಾ.ಚಂದ್ರಶೇಖರ ಹೆಗಡೆ, ತಾಲ್ಲೂಕು ಜಂಟಿ ನಿರ್ದೇಶಕ ಎಂ.ವಿ.ಚಂದ್ರು, ಸಹಾಯಕ ನಿರ್ದೇಶಕ ರಮೇಶ್ ಹಾಗೂ ವಿನಾಯಕ ಹೊಸಮನಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>