‘ದೆಹಲಿ ಮಾದರಿ’ಯ ಆಡಳಿತ ಎಲ್ಲೆಡೆಗೆ ವಿಸ್ತರಿಸಬೇಕಿದೆ. ಆಮ್ ಆದ್ಮಿ ಪಕ್ಷವನ್ನು ರಾಜಕೀಯ ಪಕ್ಷವಾಗಿ ನೋಡದೆ, ರಾಜಕೀಯ ಕ್ರಾಂತಿಗಾಗಿ ಎಂಬ ಭಾವನೆ ಮೂಡಬೇಕಿದೆ. ರಾಜಕೀಯವಾಗಿ ಬದಲಾವಣೆ ತರಬೇಕಿದ್ದು, ದೆಹಲಿ ಮಾದರಿಯ ಆಡಳಿತ ವಿಶ್ವಮಾನ್ಯವಾಗಿದೆ. ನೀರು, ವಿದ್ಯುತ್, ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಲಾಗಿದೆ. ಇದರಿಂದಾಗಿ ಬಡ ವರ್ಗದ ಜನರಿಗೆ ಪ್ರತಿ ತಿಂಗಳೂ ₹10 ಸಾವಿರದಿಂದ ₹12 ಸಾವಿರದ ವರೆಗೆ ಉಳಿತಾಯವಾಗುತ್ತಿದೆ. ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಹಣ ಲೂಟಿ ಮಾಡಿವೆ. ಎಲ್ಲೆಡೆ ಭ್ರಷ್ಟಾಚಾರ ಮನೆಮಾಡಿದೆ. ಇದನ್ನು ತಪ್ಪಿಸಲು ಪಕ್ಷವನ್ನು ಬೆಂಬಲಿಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.