ಪರವಾನಗಿ ಪಡೆಯದೆ ಪಿಜಿ ಆರಂಭಿಸಿದ್ದು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ನಿಂದನೆಯ ಬರಹ ಪ್ರಕಟಿಸಿದ ಆರೋಪದ ಮೇಲೆ ಪ್ರಕಾಶ್ ವಿರುದ್ಧ ಪೊಲೀಸರಿಗೆ ದೂರು ನೀಡಲು ಆಯುಕ್ತರು ಮುಂದಾದರು. ಆಗ ಪ್ರಕಾಶ್, ‘ನನ್ನಿಂದ ತಪ್ಪಾಗಿದೆ. ಪಿಜಿ ನಡೆಸಲು ಪರವಾನಗಿ ಪಡೆಯುವೆ. ಕ್ಷಮಾಪಣೆ ಪತ್ರ ಬರೆದುಕೊಡುವೆ’ ಎಂದು ಬೇಡಿಕೊಂಡರು.