ಪಾಂಡವಪುರ ತಾಲ್ಲೂಕಿನ ಹಿರೆಮರಳಿ ಗ್ರಾಮದ ಪ್ರಕಾಶ್ ಎಂಬುವರು ಡಿ. 20ರಂದು ಪಾಂಡವಪುರದಿಂದ ಬಳ್ಳಾರಿಗೆ ಐಶರ್ ವಾಹನದಲ್ಲಿ ಬೆಲ್ಲದ ಲೋಡ್ ತೆಗೆದುಕೊಂಡು ಹೋಗುತ್ತಿದ್ದರು. ಅಂದು ರಾತ್ರಿ 10 ಗಂಟೆಗೆ ತುರುವೇಕೆರೆಯ ಮುನಿಯೂರು ಗೇಟ್ ಸಮೀಪ ಮೂವರು ಅಪರಿಚಿತರು ರಸ್ತೆಗೆ ಅಡ್ಡಲಾಗಿ ಆಟೊ ನಿಲ್ಲಿಸಿ, ₹50 ಸಾವಿರ ಬೆಲೆ ಬಾಳುವ ಮೊಬೈಲ್, ₹100 ಹಣ ದರೋಡೆ ಮಾಡಿದ್ದರು. ಈ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.