ಎಎಸ್ಐ ಪರಮೇಶ್ವರ ಅವರ ಮೇಲೆ ವಿಕಾಸ್ ಡ್ರಾಗರ್ನಿಂದಹಲ್ಲೆ ಮಾಡಿದ. ಎಎಸ್ಐ ಎಡ ತೋಳಿಗೆಗಾಯವಾಗಿದೆ. ನಂತರ ಮತ್ತೊಬ್ಬ ಸಿಬ್ಬಂದಿ ಬಳಿ ದಾಳಿ ಮಾಡಲು ಮುಂದಾದಾಗ ಪಿಎಸ್ಐ ನವೀನ್ ಶರಣಾಗುವಂತೆ ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಎಚ್ಚರಿಕೆ ಲೆಕ್ಕಿಸದೆ ಆರೋಪಿ ಪೊಲೀಸರ ಮೇಲೆ ಎರಗಲು ಮುಂದಾದಾಗ ನವೀನ್, ಆರೋಪಿ ಎಡಗಾಲಿಗೆ ಗುಂಡುಹಾರಿಸಿದ್ದಾರೆ. ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.