ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿರುವುದು ತುಮಕೂರಿಗೆ ಮಾತ್ರ. ಆದ್ದರಿಂದ ಬೆಂಗಳೂರಿಗೆ ಬರುವ ಸಾಫ್ಟ್ವೇರ್ ಕಂಪೆನಿಗಳನ್ನು ತುಮಕೂರಿಗೆ ತರುವ ಮಹತ್ವ ಆಲೋಚನೆ ನಮ್ಮ ಮುಂದಿದೆ. ಅಲ್ಲದೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶ ಮತ್ತು ಗುಬ್ಬಿಯ ಎಚ್ಎಎಲ್ ಅಗತ್ಯಕ್ಕೆ ತಕ್ಕಂತೆ ಸ್ಯಾಟಲೈಟ್ ಟೌನ್ ನಿರ್ಮಾಣದ ಚಿಂತನೆಯೂ ಇದೆ ಎಂದು ಮಾಹಿತಿ ನೀಡಿದರು.