‘ಅಭಿವೃದ್ಧಿ ರಾಜಕಾರಣಿ ಆಗಬೇಕು ಎಂದುಕೊಂಡವನೇ ಹೊರತು. ಜನರನ್ನು ಪ್ರೇರೇಪಿಸಿ, ಕುಡಿಸಿ, ಜೂಜಾಡಿಸಿ, ಸುಳ್ಳು ಭರವಸೆಗಳನ್ನು ನೀಡಿ, ಅವರನ್ನು ಪ್ರಚೋದಿಸಿ ಮತ ಪಡೆದು ರಾಜಕಾರಣಿಯಾಗಿ ಅಧಿಕಾರ ನಡೆಸಬೇಕು ಎಂಬ ಯೋಚನೆಯನ್ನೂ ಮಾಡಿಲ್ಲ. ಜನರನ್ನು ಪೀಡಿಸುತ್ತಿದ್ದ ಗುತ್ತಿಗೆದಾರರು, ಅಧಿಕಾರಿಗಳು, ವೈದ್ಯರು, ಸರ್ಕಾರಿ ಶಾಲೆಯ ಶಿಕ್ಷಕರು, ಕೆಲವು ಗ್ರಾಮಗಳ ಮುಖಂಡರ ಜತೆಗೆ ಕಠಿಣವಾಗಿ ನಡೆದುಕೊಂಡೆ. ಇದೇ ಕಾರಣಕ್ಕೆ ಚುನಾವಣೆಯಲ್ಲಿ ಇವರೆಲ್ಲ ಅಪಪ್ರಚಾರ ಮಾಡಿದರು’ ಎಂದು ನೆನಪಿಸಿಕೊಂಡರು.