ಪುರಸಭೆ ಸಾಮಾನ್ಯ ಸಭೆಯಲ್ಲಿ ತುಮಕೂರು ರಸ್ತೆಯಲ್ಲಿ ಅನಧಿಕೃತ ಪೆಟ್ಟಿ ಅಂಗಡಿಗಳನ್ನು ತೆರವಿಗೆ ನಿರ್ಲಕ್ಷ್ಯ ವಹಿಸಿದ ಪರಿಸರ ಇಂಜನಿಯರ್ ಚಂದ್ರಶೇಖರ್ ಮೇಲೆ ನೀರಿನ ಬಾಟಿಲಿ ಸದಸ್ಯೆ ಜಯಲಕ್ಷ್ಮೀ ತೂರಿ ವಿವಾದ ಸೃಷ್ಟಿಸಿದ್ದರು. ಸದಸ್ಯೆ ಆಗ್ರಹದ ಮೇರೆಗೆ ಮುಖ್ಯಾಧಿಕಾರಿ ರವಿಕುಮಾರ್, ಪರಿಸರ ಎಂಜನಿಯರ್ ಚಂದ್ರಶೇಖರ್, ಕಂದಾಯ ನಿರೀಕ್ಷಕ ಜಗರೆಡ್ಡಿ, ಆರೋಗ್ಯ ನಿರೀಕ್ಷಕಿ ಮಮತಾ ತಂಡ ಬೆಳಗ್ಗೆಯೆ ಪೊಲೀಸರೊಂದಿಗೆ ತೆರಳಿ ಪೆಟ್ಟಿಗೆ ಅಂಗಡಿಗಳ ತೆರವಿಗೆ ಮುಂದಾದರು.