<p><strong>ಚಿಕ್ಕನಾಯಕನಹಳ್ಳಿ</strong>: ಪಟ್ಟಣದ ಪ್ರಮುಖ ಕೇಂದ್ರವಾದ ನೆಹರೂ ವೃತ್ತದಲ್ಲಿ ಅಳವಡಿಸಿರುವ ಮಾರ್ಗಸೂಚಿ ಫಲಕಗಳು ಈಗ ಫ್ಲೆಕ್ಸ್ ಮತ್ತು ಬ್ಯಾನರ್ಗಳ ಮರೆಯಲ್ಲಿ ಅಡಗಿವೆ.</p>.<p>ಇದರಿಂದಾಗಿ ರಾತ್ರಿ ಸಂಚರಿಸುವ ದೊಡ್ಡ ವಾಹನಗಳ ಚಾಲಕರು ದಾರಿ ತಿಳಿಯದೆ ತೊಂದರೆ ಅನುಭವಿಸುತ್ತಿದ್ದಾರೆ. ನೆಹರೂ ವೃತ್ತದಿಂದ ನಾನಾ ಊರುಗಳಿಗೆ ಹೋಗುವ ಮಾರ್ಗಗಳನ್ನು ಸೂಚಿಸುವ ನಾಮಫಲಕವನ್ನು ಪುರಸಭೆ ಅಳವಡಿಸಿದೆ. ಆದರೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಕಾರ್ಯಕ್ರಮ ಆಯೋಜಕರು ತಮ್ಮ ಪ್ರಚಾರಕ್ಕಾಗಿ ಈ ನಾಮಫಲಕದ ಮೇಲೆಯೇ ಅಥವಾ ಅದರ ಮುಂಭಾಗದಲ್ಲೇ ಬೃಹತ್ ಫ್ಲೆಕ್ಸ್ ಬ್ಯಾನರ್ಗಳನ್ನು ಅಳವಡಿಸುತ್ತಿದ್ದಾರೆ.</p>.<p>ರಾತ್ರಿ 10 ಗಂಟೆ ನಂತರ ಸಂಚರಿಸುವ ದೊಡ್ಡ ಲಾರಿಗಳು, ನಾಮಫಲಕ ಕಾಣದ ಕಾರಣ ದಾರಿ ತಪ್ಪಿ ಹಾಗಲವಾಡಿ ಗೇಟ್ ಕಡೆಗೆ ಹೋಗುತ್ತಿವೆ. ಅಲ್ಲಿಗೆ ಹೋದ ನಂತರ ರಸ್ತೆ ಕಿರಿದಾಗಿರುವುದರಿಂದ ಲಾರಿಗಳನ್ನು ಮುಖ್ಯರಸ್ತೆಗೆ ಹಿಂತಿರುಗಿಸಲು ಸಾಧ್ಯವಾಗದೆ ಚಾಲಕರು ಗಂಟೆಗಟ್ಟಲೆ ಪರದಾಡುವಂತಾಗಿದೆ. </p>.<p>ಸುಗಮ ಸಂಚಾರಕ್ಕಾಗಿ ಪಟ್ಟಣದಲ್ಲಿನ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆ ಪುರಸಭೆಗೆ ಈಗಾಗಲೇ ಲಿಖಿತ ಮನವಿ ಮಾಡಿತ್ತು. ಆದರೆ ಪುರಸಭೆ ಅಧಿಕಾರಿಗಳು ಇದುವರೆಗೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ.</p>.<p>ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವವರು ಇತರರಿಗೆ ತೊಂದರೆಯಾಗುತ್ತದೆಯೇ ಎಂದು ಯೋಚಿಸುವುದು ಅಗತ್ಯ. ಸಂಬಂಧಪಟ್ಟ ಪುರಸಭಾ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ, ನಾಮಫಲಕಗಳನ್ನು ಮುಚ್ಚಿರುವ ಬ್ಯಾನರ್ಗಳನ್ನು ತೆರವುಗೊಳಿಸಿ ವಾಹನ ಸವಾರರಿಗೆ ದಾರಿ ಸುಗಮಗೊಳಿಸಬೇಕು ಎಂದು ಪಟ್ಟಣ ನಿವಾಸಿಗಳು ಒತ್ತಾಯಿಸಿದ್ದಾರೆ.</p>.<p> <strong>ಚಾಲಕರ ಪರದಾಟ</strong></p><p>ಭಾರಿ ಗಾತ್ರದ ವಾಹನಗಳು ರಾತ್ರಿ ವೇಳೆ ನೆಹರೂ ವೃತ್ತದಲ್ಲಿ ಮಾರ್ಗಸೂಚಿ ಫಲಕ ಕಾಣದೆ ಮತ್ತೊಂದು ದಾರಿಯಲ್ಲಿ ಹೋಗಿ ಮುಖ್ಯ ರಸ್ತೆಗೆ ಹಿಂದಿರುಗಲು ಪರದಾಡುವಂತಾಗಿದೆ. ಅಧಿಕಾರಿಗಳು ಮಾರ್ಗಸೂಚಿ ಫಲಕಕ್ಕೆ ಅಡ್ಡಲಾಗಿ ಯಾವುದೇ ಫಲಕಗಳನ್ನು ಅಳವಡಿಸಬಾರದು - ಮಂಜುನಾಥ್, ಆಟೊ ಚಾಲಕರ ಸಂಘ ಅಧ್ಯಕ್ಷ </p><p><strong>ಬೇರೆಡೆ ವ್ಯವಸ್ಥೆ ಮಾಡಿ </strong></p><p>ಯಾವುದೇ ಕಾರ್ಯಕ್ರಮ ಆಯೋಜನೆಗೊಂಡರು ವೃತ್ತದಲ್ಲಿ ಫ್ಲೆಕ್ಸ್ ಹಾಕುತ್ತಾರೆ. ಅಲ್ಲಿರುವ ಮಾರ್ಗಸೂಚಿಯನ್ನು ಒತ್ತಾಯಪೂರ್ವಕವಾಗಿ ಪುರಸಭೆಯಿಂದ ಹಾಕಿಸಿದ್ದೇವೆ. ವಾಹನ ಸವಾರರಿಗೆ ಮಾರ್ಗಸೂಚಿಯ ಪ್ರಯೋಜನವಿಲ್ಲದಂತೆ ಪ್ಲೆಕ್ಸ್ಗಳನ್ನು ಅಳವಡಿಸುತ್ತಿದ್ದಾರೆ. ಫ್ಲೆಕ್ಸ್ಗಳನ್ನು ಬೇರೆಡೆ ಹಾಕಿಸುವ ವ್ಯವಸ್ಥೆ ಮಾಡಲಿ. ಇಲ್ಲವಾದಲ್ಲಿ ಮಾರ್ಗಸೂಚಿಯನ್ನು ವಾಹನ ಸವಾರರಿಗೆ ಅನುಕೂಲವಾಗುವಂತೆ ಮತ್ತೊಂದೆಡೆ ಹಾಕಲಿ - ಯೋಗೀಶ್ ಶಾವಿಗೇಹಳ್ಳಿ </p><p><strong>ಬೇಜವಾಬ್ದಾರಿ</strong> </p><p>ಈ ಬಗ್ಗೆ ಕ್ರಮ ಕೈಗೊಳ್ಳಲು ಹಲವು ಬಾರಿ ಆರೋಗ್ಯ ನಿರೀಕ್ಷಕರಿಗೆ ಹೇಳಿದ್ದೇನೆ. ಆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೊಂದು ಗಂಭೀರ ಪ್ರಕರಣ. ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ಹೇಳಿದರೂ ನಾನು ರಜೆಯಲ್ಲಿದ್ದೇನೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ - ಮಂಜಮ್ಮ, ಪುರಸಭಾ ಮುಖ್ಯಾಧಿಕಾರಿ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ</strong>: ಪಟ್ಟಣದ ಪ್ರಮುಖ ಕೇಂದ್ರವಾದ ನೆಹರೂ ವೃತ್ತದಲ್ಲಿ ಅಳವಡಿಸಿರುವ ಮಾರ್ಗಸೂಚಿ ಫಲಕಗಳು ಈಗ ಫ್ಲೆಕ್ಸ್ ಮತ್ತು ಬ್ಯಾನರ್ಗಳ ಮರೆಯಲ್ಲಿ ಅಡಗಿವೆ.</p>.<p>ಇದರಿಂದಾಗಿ ರಾತ್ರಿ ಸಂಚರಿಸುವ ದೊಡ್ಡ ವಾಹನಗಳ ಚಾಲಕರು ದಾರಿ ತಿಳಿಯದೆ ತೊಂದರೆ ಅನುಭವಿಸುತ್ತಿದ್ದಾರೆ. ನೆಹರೂ ವೃತ್ತದಿಂದ ನಾನಾ ಊರುಗಳಿಗೆ ಹೋಗುವ ಮಾರ್ಗಗಳನ್ನು ಸೂಚಿಸುವ ನಾಮಫಲಕವನ್ನು ಪುರಸಭೆ ಅಳವಡಿಸಿದೆ. ಆದರೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಕಾರ್ಯಕ್ರಮ ಆಯೋಜಕರು ತಮ್ಮ ಪ್ರಚಾರಕ್ಕಾಗಿ ಈ ನಾಮಫಲಕದ ಮೇಲೆಯೇ ಅಥವಾ ಅದರ ಮುಂಭಾಗದಲ್ಲೇ ಬೃಹತ್ ಫ್ಲೆಕ್ಸ್ ಬ್ಯಾನರ್ಗಳನ್ನು ಅಳವಡಿಸುತ್ತಿದ್ದಾರೆ.</p>.<p>ರಾತ್ರಿ 10 ಗಂಟೆ ನಂತರ ಸಂಚರಿಸುವ ದೊಡ್ಡ ಲಾರಿಗಳು, ನಾಮಫಲಕ ಕಾಣದ ಕಾರಣ ದಾರಿ ತಪ್ಪಿ ಹಾಗಲವಾಡಿ ಗೇಟ್ ಕಡೆಗೆ ಹೋಗುತ್ತಿವೆ. ಅಲ್ಲಿಗೆ ಹೋದ ನಂತರ ರಸ್ತೆ ಕಿರಿದಾಗಿರುವುದರಿಂದ ಲಾರಿಗಳನ್ನು ಮುಖ್ಯರಸ್ತೆಗೆ ಹಿಂತಿರುಗಿಸಲು ಸಾಧ್ಯವಾಗದೆ ಚಾಲಕರು ಗಂಟೆಗಟ್ಟಲೆ ಪರದಾಡುವಂತಾಗಿದೆ. </p>.<p>ಸುಗಮ ಸಂಚಾರಕ್ಕಾಗಿ ಪಟ್ಟಣದಲ್ಲಿನ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆ ಪುರಸಭೆಗೆ ಈಗಾಗಲೇ ಲಿಖಿತ ಮನವಿ ಮಾಡಿತ್ತು. ಆದರೆ ಪುರಸಭೆ ಅಧಿಕಾರಿಗಳು ಇದುವರೆಗೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ.</p>.<p>ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವವರು ಇತರರಿಗೆ ತೊಂದರೆಯಾಗುತ್ತದೆಯೇ ಎಂದು ಯೋಚಿಸುವುದು ಅಗತ್ಯ. ಸಂಬಂಧಪಟ್ಟ ಪುರಸಭಾ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ, ನಾಮಫಲಕಗಳನ್ನು ಮುಚ್ಚಿರುವ ಬ್ಯಾನರ್ಗಳನ್ನು ತೆರವುಗೊಳಿಸಿ ವಾಹನ ಸವಾರರಿಗೆ ದಾರಿ ಸುಗಮಗೊಳಿಸಬೇಕು ಎಂದು ಪಟ್ಟಣ ನಿವಾಸಿಗಳು ಒತ್ತಾಯಿಸಿದ್ದಾರೆ.</p>.<p> <strong>ಚಾಲಕರ ಪರದಾಟ</strong></p><p>ಭಾರಿ ಗಾತ್ರದ ವಾಹನಗಳು ರಾತ್ರಿ ವೇಳೆ ನೆಹರೂ ವೃತ್ತದಲ್ಲಿ ಮಾರ್ಗಸೂಚಿ ಫಲಕ ಕಾಣದೆ ಮತ್ತೊಂದು ದಾರಿಯಲ್ಲಿ ಹೋಗಿ ಮುಖ್ಯ ರಸ್ತೆಗೆ ಹಿಂದಿರುಗಲು ಪರದಾಡುವಂತಾಗಿದೆ. ಅಧಿಕಾರಿಗಳು ಮಾರ್ಗಸೂಚಿ ಫಲಕಕ್ಕೆ ಅಡ್ಡಲಾಗಿ ಯಾವುದೇ ಫಲಕಗಳನ್ನು ಅಳವಡಿಸಬಾರದು - ಮಂಜುನಾಥ್, ಆಟೊ ಚಾಲಕರ ಸಂಘ ಅಧ್ಯಕ್ಷ </p><p><strong>ಬೇರೆಡೆ ವ್ಯವಸ್ಥೆ ಮಾಡಿ </strong></p><p>ಯಾವುದೇ ಕಾರ್ಯಕ್ರಮ ಆಯೋಜನೆಗೊಂಡರು ವೃತ್ತದಲ್ಲಿ ಫ್ಲೆಕ್ಸ್ ಹಾಕುತ್ತಾರೆ. ಅಲ್ಲಿರುವ ಮಾರ್ಗಸೂಚಿಯನ್ನು ಒತ್ತಾಯಪೂರ್ವಕವಾಗಿ ಪುರಸಭೆಯಿಂದ ಹಾಕಿಸಿದ್ದೇವೆ. ವಾಹನ ಸವಾರರಿಗೆ ಮಾರ್ಗಸೂಚಿಯ ಪ್ರಯೋಜನವಿಲ್ಲದಂತೆ ಪ್ಲೆಕ್ಸ್ಗಳನ್ನು ಅಳವಡಿಸುತ್ತಿದ್ದಾರೆ. ಫ್ಲೆಕ್ಸ್ಗಳನ್ನು ಬೇರೆಡೆ ಹಾಕಿಸುವ ವ್ಯವಸ್ಥೆ ಮಾಡಲಿ. ಇಲ್ಲವಾದಲ್ಲಿ ಮಾರ್ಗಸೂಚಿಯನ್ನು ವಾಹನ ಸವಾರರಿಗೆ ಅನುಕೂಲವಾಗುವಂತೆ ಮತ್ತೊಂದೆಡೆ ಹಾಕಲಿ - ಯೋಗೀಶ್ ಶಾವಿಗೇಹಳ್ಳಿ </p><p><strong>ಬೇಜವಾಬ್ದಾರಿ</strong> </p><p>ಈ ಬಗ್ಗೆ ಕ್ರಮ ಕೈಗೊಳ್ಳಲು ಹಲವು ಬಾರಿ ಆರೋಗ್ಯ ನಿರೀಕ್ಷಕರಿಗೆ ಹೇಳಿದ್ದೇನೆ. ಆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೊಂದು ಗಂಭೀರ ಪ್ರಕರಣ. ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ಹೇಳಿದರೂ ನಾನು ರಜೆಯಲ್ಲಿದ್ದೇನೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ - ಮಂಜಮ್ಮ, ಪುರಸಭಾ ಮುಖ್ಯಾಧಿಕಾರಿ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>