<p><strong>ಚಿಕ್ಕನಾಯಕನಹಳ್ಳಿ:</strong> ಪಟ್ಟಣದ ಪೊಲೀಸ್ ವಸತಿ ಗೃಹದ ಆವರಣದಲ್ಲಿರುವ ಸಾರ್ವಜನಿಕ ಹಾಗೂ ಪೊಲೀಸ್ ಸಮುದಾಯ ಭವನ ಸೂಕ್ತ ನಿರ್ವಹಣೆ ಇಲ್ಲದೆ ನಿಸ್ತೇಜಗೊಂಡಿದೆ.</p>.<p>ಒಂದು ಕಾಲದಲ್ಲಿ ಪಟ್ಟಣದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಆದರೆ ಇಂದು ಅದೇ ಭವನವು ಸೂಕ್ತ ನಿರ್ವಹಣೆ ಇಲ್ಲದೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವುದು ವಿಷಾದನೀಯ.</p>.<p>ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕೇವಲ ಕಾಲ್ನಡಿಗೆ ದೂರದಲ್ಲಿರುವ ಈ ಭವನ ದೂರದ ಊರುಗಳಿಂದ ಬರುವ ಅತಿಥಿಗಳಿಗೆ ಸುಲಭವಾಗಿ ತಲುಪಬಹುದಾದ ಸ್ಥಳವಾಗಿದೆ.</p>.<p>ವಿಶಾಲವಾದ ಜಾಗ, ಸುಸಜ್ಜಿತ ಸಭಾಂಗಣ ಮತ್ತು ಎಲ್ಲ ರೀತಿಯ ಸೌಕರ್ಯಗಳನ್ನು ಹೊಂದಿದ್ದ ಈ ಭವನ ಪಟ್ಟಣದ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಲಭ್ಯವಿದ್ದ ಅತ್ಯುತ್ತಮ ಕಲ್ಯಾಣ ಮಂಟಪಗಳಲ್ಲಿ ಒಂದಾಗಿತ್ತು.</p>.<p>ಶುಭ ಸಮಾರಂಭಗಳ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದ ಈ ಕಟ್ಟಡವು ಇಂದು ಸ್ತಬ್ಧವಾಗಿದೆ. ದಿನಗಳು ಕಳೆದಂತೆ ಸುಣ್ಣ-ಬಣ್ಣ ಮಾಸಿ, ಆವರಣದಲ್ಲಿ ಗಿಡಗಂಟಿ ಬೆಳೆದು ಹಳೆಯ ಹೊಳಪನ್ನು ಕಳೆದುಕೊಂಡಿದೆ. ನಿರ್ವಹಣೆಯಿಲ್ಲದ ಕಾರಣ ಸಾರ್ವಜನಿಕರು ಈ ಭವನದತ್ತ ಮುಖ ಮಾಡಲು ಹಿಂಜರಿಯುತ್ತಿದ್ದಾರೆ. </p>.<p>ಖಾಸಗಿ ಕಲ್ಯಾಣ ಮಂಟಪಗಳ ದುಬಾರಿ ವೆಚ್ಚವನ್ನು ಭರಿಸಲಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ಪೊಲೀಸ್ ಭವನವು ವರದಾನವಾಗಿತ್ತು. ಇದನ್ನು ಪುನಃ ದುರಸ್ತಿಗೊಳಿಸಿ, ಸ್ವಚ್ಛತೆ ಕಾಪಾಡಿ, ಅಗತ್ಯವಿರುವ ತಾಂತ್ರಿಕ ಸೌಲಭ್ಯ ಅಳವಡಿಸಿದರೆ ಮತ್ತೆ ಜನಸ್ನೇಹಿಯಾಗಬಲ್ಲದು ಎಂಬುದು ಸ್ಥಳೀಯರು ಅಭಿಪ್ರಾಯ.</p>.<p>ಪೊಲೀಸ್ ಭವನ ಕೇವಲ ಒಂದು ಕಟ್ಟಡವಲ್ಲ. ಅದು ಹತ್ತಾರು ಕುಟುಂಬಗಳ ಸಂಭ್ರಮಕ್ಕೆ ಆಸರೆಯಾಗಿದ್ದ ವೇದಿಕೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ. ಅಗತ್ಯ ಅನುದಾನ ಬಿಡುಗಡೆ ಮಾಡಿ ಸುಸ್ಥಿತಿಗೆ ತಂದರೆ ಸಾರ್ವಜನಿಕರಿಗೆ ಪ್ರಯೋಜನಕಾರಿ ಎನ್ನುತ್ತಾರೆ ಪಟ್ಟಣದ ನಾಗರೀಕರು.</p>.<p>ಸಣ್ಣಪುಟ್ಟ ಶುಭ ಸಮಾರಂಭಗಳಿಗೂ ದುಬಾರಿ ವೆಚ್ಚದ ಖಾಸಗಿ ಕಲ್ಯಾಣ ಮಂಟಪ ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ. ಪಟ್ಟಣದ ಈ ಸಮುದಾಯ ಭವನ ಸುರಕ್ಷಿತ ಹಾಗೂ ಆಹ್ಲಾದಕರ ವಾತಾವರಣದಲ್ಲಿದೆ. ಇದನ್ನು ಪುನಶ್ಚೇತನಗೊಳಿಸಿ, ಬಡವರಿಗೂ ಕೈಗೆಟುಕುವ ದರದಲ್ಲಿ ಬಾಡಿಗೆ ನೀಡಿದಲ್ಲಿ ಅನುಕೂಲ ಚಿತ್ರಕಲೆ ಹಾಗೂ ರಂಗಭೂಮಿ ಕಲಾವಿದ ಗಂಗಾಧರ್ ಮಗ್ಗದಮನೆ ಹೆಳಿದರು.</p>.<p>ಪಟ್ಟಣದ ಹೃದಯಭಾಗದಲ್ಲಿರುವ ಭವನ ಸಾರ್ವಜನಿಕ ಸಮಾರಂಭಗಳಿಗೆ ಸೂಕ್ತವಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಸಂಬಂಧಪಟ್ಟವರು ಕಟ್ಟಡದ ವ್ಯವಸ್ಥಿತ ನಿರ್ವಹಣೆಗಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಮಾತಾ ಗಾರ್ಮೆಂಟ್ಸ್ನ ಯೋಗೀಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ:</strong> ಪಟ್ಟಣದ ಪೊಲೀಸ್ ವಸತಿ ಗೃಹದ ಆವರಣದಲ್ಲಿರುವ ಸಾರ್ವಜನಿಕ ಹಾಗೂ ಪೊಲೀಸ್ ಸಮುದಾಯ ಭವನ ಸೂಕ್ತ ನಿರ್ವಹಣೆ ಇಲ್ಲದೆ ನಿಸ್ತೇಜಗೊಂಡಿದೆ.</p>.<p>ಒಂದು ಕಾಲದಲ್ಲಿ ಪಟ್ಟಣದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಆದರೆ ಇಂದು ಅದೇ ಭವನವು ಸೂಕ್ತ ನಿರ್ವಹಣೆ ಇಲ್ಲದೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವುದು ವಿಷಾದನೀಯ.</p>.<p>ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕೇವಲ ಕಾಲ್ನಡಿಗೆ ದೂರದಲ್ಲಿರುವ ಈ ಭವನ ದೂರದ ಊರುಗಳಿಂದ ಬರುವ ಅತಿಥಿಗಳಿಗೆ ಸುಲಭವಾಗಿ ತಲುಪಬಹುದಾದ ಸ್ಥಳವಾಗಿದೆ.</p>.<p>ವಿಶಾಲವಾದ ಜಾಗ, ಸುಸಜ್ಜಿತ ಸಭಾಂಗಣ ಮತ್ತು ಎಲ್ಲ ರೀತಿಯ ಸೌಕರ್ಯಗಳನ್ನು ಹೊಂದಿದ್ದ ಈ ಭವನ ಪಟ್ಟಣದ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಲಭ್ಯವಿದ್ದ ಅತ್ಯುತ್ತಮ ಕಲ್ಯಾಣ ಮಂಟಪಗಳಲ್ಲಿ ಒಂದಾಗಿತ್ತು.</p>.<p>ಶುಭ ಸಮಾರಂಭಗಳ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದ ಈ ಕಟ್ಟಡವು ಇಂದು ಸ್ತಬ್ಧವಾಗಿದೆ. ದಿನಗಳು ಕಳೆದಂತೆ ಸುಣ್ಣ-ಬಣ್ಣ ಮಾಸಿ, ಆವರಣದಲ್ಲಿ ಗಿಡಗಂಟಿ ಬೆಳೆದು ಹಳೆಯ ಹೊಳಪನ್ನು ಕಳೆದುಕೊಂಡಿದೆ. ನಿರ್ವಹಣೆಯಿಲ್ಲದ ಕಾರಣ ಸಾರ್ವಜನಿಕರು ಈ ಭವನದತ್ತ ಮುಖ ಮಾಡಲು ಹಿಂಜರಿಯುತ್ತಿದ್ದಾರೆ. </p>.<p>ಖಾಸಗಿ ಕಲ್ಯಾಣ ಮಂಟಪಗಳ ದುಬಾರಿ ವೆಚ್ಚವನ್ನು ಭರಿಸಲಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ಪೊಲೀಸ್ ಭವನವು ವರದಾನವಾಗಿತ್ತು. ಇದನ್ನು ಪುನಃ ದುರಸ್ತಿಗೊಳಿಸಿ, ಸ್ವಚ್ಛತೆ ಕಾಪಾಡಿ, ಅಗತ್ಯವಿರುವ ತಾಂತ್ರಿಕ ಸೌಲಭ್ಯ ಅಳವಡಿಸಿದರೆ ಮತ್ತೆ ಜನಸ್ನೇಹಿಯಾಗಬಲ್ಲದು ಎಂಬುದು ಸ್ಥಳೀಯರು ಅಭಿಪ್ರಾಯ.</p>.<p>ಪೊಲೀಸ್ ಭವನ ಕೇವಲ ಒಂದು ಕಟ್ಟಡವಲ್ಲ. ಅದು ಹತ್ತಾರು ಕುಟುಂಬಗಳ ಸಂಭ್ರಮಕ್ಕೆ ಆಸರೆಯಾಗಿದ್ದ ವೇದಿಕೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ. ಅಗತ್ಯ ಅನುದಾನ ಬಿಡುಗಡೆ ಮಾಡಿ ಸುಸ್ಥಿತಿಗೆ ತಂದರೆ ಸಾರ್ವಜನಿಕರಿಗೆ ಪ್ರಯೋಜನಕಾರಿ ಎನ್ನುತ್ತಾರೆ ಪಟ್ಟಣದ ನಾಗರೀಕರು.</p>.<p>ಸಣ್ಣಪುಟ್ಟ ಶುಭ ಸಮಾರಂಭಗಳಿಗೂ ದುಬಾರಿ ವೆಚ್ಚದ ಖಾಸಗಿ ಕಲ್ಯಾಣ ಮಂಟಪ ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ. ಪಟ್ಟಣದ ಈ ಸಮುದಾಯ ಭವನ ಸುರಕ್ಷಿತ ಹಾಗೂ ಆಹ್ಲಾದಕರ ವಾತಾವರಣದಲ್ಲಿದೆ. ಇದನ್ನು ಪುನಶ್ಚೇತನಗೊಳಿಸಿ, ಬಡವರಿಗೂ ಕೈಗೆಟುಕುವ ದರದಲ್ಲಿ ಬಾಡಿಗೆ ನೀಡಿದಲ್ಲಿ ಅನುಕೂಲ ಚಿತ್ರಕಲೆ ಹಾಗೂ ರಂಗಭೂಮಿ ಕಲಾವಿದ ಗಂಗಾಧರ್ ಮಗ್ಗದಮನೆ ಹೆಳಿದರು.</p>.<p>ಪಟ್ಟಣದ ಹೃದಯಭಾಗದಲ್ಲಿರುವ ಭವನ ಸಾರ್ವಜನಿಕ ಸಮಾರಂಭಗಳಿಗೆ ಸೂಕ್ತವಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಸಂಬಂಧಪಟ್ಟವರು ಕಟ್ಟಡದ ವ್ಯವಸ್ಥಿತ ನಿರ್ವಹಣೆಗಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಮಾತಾ ಗಾರ್ಮೆಂಟ್ಸ್ನ ಯೋಗೀಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>