ಕಲ್ಯಾಣಿಯ ಬಗ್ಗೆ ಗಮನ ಹರಿಸಿದ ದೇವಾಲಯದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಸ್ವಚ್ಛತೆಗೆ ಮುಂದಾದರು. ಅಧಿಕಾರಿಯ ನಿರ್ಣಯಕ್ಕೆ 85 ಸಿಬ್ಬಂದಿ ಮತ್ತು ದೇವಾಲಯದ ಆಡಳಿತಕ್ಕೊಳಪಟ್ಟಿರುವ ಸಂಸ್ಕೃತ ಪಾಠಶಾಲೆ, ಪದವಿಪೂರ್ವ ಕಾಲೇಜಿನ 300 ವಿದ್ಯಾರ್ಥಿಗಳು ಕೈ ಜೋಡಿಸಿ ಕಳೆದ ಫೆಬ್ರುವರಿ ಒಂದರಂದು ಸ್ವಚ್ಛತೆ ಪ್ರಾರಂಭಿಸಿದ್ದು, ಈಗ ಪೂರ್ಣಗೊಂಡಿದೆ.