<p><strong>ಹುಲಿಯೂರುದುರ್ಗ: </strong>ಕೆಲಸ ಅರಸಿ ಬೆಂಗಳೂರಿಗೆ ತೆರಳಿ ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದ ಹೋಬಳಿಯ ಮೇದರದೊಡ್ಡಿ ಗ್ರಾಮದ ಕೆಲವರು ಕೊರೊನಾ ಭೀತಿಯಿಂದ ಸ್ವಗ್ರಾಮಕ್ಕೆ ಮರಳಿದ ನಂತರ ಕೈ ಚೆಲ್ಲಿ ಕೂರದೆ ಬದುಕನ್ನು ಸಹ್ಯವಾಗಿಸಿಕೊಂಡಿದ್ದಾರೆ. ದುಡಿಯುವ ಕೈಗಳು ಮುಂದಾಗಿದ್ದರೆ ಕೆಲಸ ದೊರೆಯುವುದೇನೂ ಹೆಚ್ಚಲ್ಲ ಎನ್ನುವುದಕ್ಕೆ ಇವರು ಸಾಕ್ಷಿಯಾಗಿದ್ದಾರೆ.</p>.<p>ತಾವರೆಕೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ತಮ್ಮ ಗ್ರಾಮದ ಚರಂಡಿಗಳ ಸ್ವಚ್ಛತಾ ಕಾಮಗಾರಿಯನ್ನು ತಮಗೇ ನೀಡಬೇಕೆಂದು ಮನವೊಲಿಸುವಲ್ಲಿ ಯಶಸ್ವಿಯಾದ ಯುವಕರು ಜನ ಒಪ್ಪುವಂತೆ ಕೆಲಸ ಮಾಡಿದ್ದಾರೆ.</p>.<p>‘ನಿರ್ಮಾಣಗೊಂಡ ದಿನದಂದಲೂ ನಿರ್ವಹಣೆ ಇಲ್ಲದೆ ಕಲ್ಲು- ಮಣ್ಣು, ಹುಲ್ಲು- ಗಿಡಗಂಟಿಗಳಿಂದ ಬಹುತೇಕ ಮುಚ್ಚಿಹೋಗಿದ್ದ ಗ್ರಾಮದ ಚರಂಡಿಗಳನ್ನು ಮಳೆಗಾಲದ ಮುನ್ನಾ ದಿನಗಳಲ್ಲಿ ಸ್ವಚ್ಛಗೊಳಿಸಿರುವುದು ಸಕಾಲಿಕವಾಗಿದೆ’ ಎಂದು ಹನುಮಯ್ಯ ಹೇಳಿದರು.</p>.<p>ಬೆಂಗಳೂರಿನಲ್ಲಿ ಸ್ವಂತದ ಕ್ಯಾಂಟರ್, ಆಟೊ ಓಡಿಸುತ್ತಿದ್ದವರು, ಬ್ಯಾಂಕ್ - ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದವರು, ಮಾರುಕಟ್ಟೆಗಳಲ್ಲಿ ವಾಹನಗಳಿಗೆ ಸರಕು ತುಂಬುತ್ತಿದ್ದವರು ಊರಿನ ಸ್ವಚ್ಛತಾ ಕಾರ್ಯ ಮಾಡಿದವರಲ್ಲಿ ಸೇರಿದ್ದಾರೆ.</p>.<p>ಶಿವರಾಜು, ಅಂದಾನಯ್ಯ, ವೆಂಕಟಗಿರಯ್ಯ, ಎಂ.ಡಿ.ಮಹಲಿಂಗಯ್ಯ, ದೇವರಾಜು ಸೇರಿದಂತೆ ಹದಿನೆಂಟು ಕೆಲಸಗಾರರು ಚರಂಡಿಗಳ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಿಯೂರುದುರ್ಗ: </strong>ಕೆಲಸ ಅರಸಿ ಬೆಂಗಳೂರಿಗೆ ತೆರಳಿ ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದ ಹೋಬಳಿಯ ಮೇದರದೊಡ್ಡಿ ಗ್ರಾಮದ ಕೆಲವರು ಕೊರೊನಾ ಭೀತಿಯಿಂದ ಸ್ವಗ್ರಾಮಕ್ಕೆ ಮರಳಿದ ನಂತರ ಕೈ ಚೆಲ್ಲಿ ಕೂರದೆ ಬದುಕನ್ನು ಸಹ್ಯವಾಗಿಸಿಕೊಂಡಿದ್ದಾರೆ. ದುಡಿಯುವ ಕೈಗಳು ಮುಂದಾಗಿದ್ದರೆ ಕೆಲಸ ದೊರೆಯುವುದೇನೂ ಹೆಚ್ಚಲ್ಲ ಎನ್ನುವುದಕ್ಕೆ ಇವರು ಸಾಕ್ಷಿಯಾಗಿದ್ದಾರೆ.</p>.<p>ತಾವರೆಕೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ತಮ್ಮ ಗ್ರಾಮದ ಚರಂಡಿಗಳ ಸ್ವಚ್ಛತಾ ಕಾಮಗಾರಿಯನ್ನು ತಮಗೇ ನೀಡಬೇಕೆಂದು ಮನವೊಲಿಸುವಲ್ಲಿ ಯಶಸ್ವಿಯಾದ ಯುವಕರು ಜನ ಒಪ್ಪುವಂತೆ ಕೆಲಸ ಮಾಡಿದ್ದಾರೆ.</p>.<p>‘ನಿರ್ಮಾಣಗೊಂಡ ದಿನದಂದಲೂ ನಿರ್ವಹಣೆ ಇಲ್ಲದೆ ಕಲ್ಲು- ಮಣ್ಣು, ಹುಲ್ಲು- ಗಿಡಗಂಟಿಗಳಿಂದ ಬಹುತೇಕ ಮುಚ್ಚಿಹೋಗಿದ್ದ ಗ್ರಾಮದ ಚರಂಡಿಗಳನ್ನು ಮಳೆಗಾಲದ ಮುನ್ನಾ ದಿನಗಳಲ್ಲಿ ಸ್ವಚ್ಛಗೊಳಿಸಿರುವುದು ಸಕಾಲಿಕವಾಗಿದೆ’ ಎಂದು ಹನುಮಯ್ಯ ಹೇಳಿದರು.</p>.<p>ಬೆಂಗಳೂರಿನಲ್ಲಿ ಸ್ವಂತದ ಕ್ಯಾಂಟರ್, ಆಟೊ ಓಡಿಸುತ್ತಿದ್ದವರು, ಬ್ಯಾಂಕ್ - ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದವರು, ಮಾರುಕಟ್ಟೆಗಳಲ್ಲಿ ವಾಹನಗಳಿಗೆ ಸರಕು ತುಂಬುತ್ತಿದ್ದವರು ಊರಿನ ಸ್ವಚ್ಛತಾ ಕಾರ್ಯ ಮಾಡಿದವರಲ್ಲಿ ಸೇರಿದ್ದಾರೆ.</p>.<p>ಶಿವರಾಜು, ಅಂದಾನಯ್ಯ, ವೆಂಕಟಗಿರಯ್ಯ, ಎಂ.ಡಿ.ಮಹಲಿಂಗಯ್ಯ, ದೇವರಾಜು ಸೇರಿದಂತೆ ಹದಿನೆಂಟು ಕೆಲಸಗಾರರು ಚರಂಡಿಗಳ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>