ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ‘ಸಂವಿಧಾನದ ಆಶಯದ ವಿರುದ್ಧ ಹೋಗುವುದು ಕಾನೂನು ಪ್ರಕಾರವಲ್ಲದೆ ನೈತಿಕವಾಗಿಯೂ ತಪ್ಪು. ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಶೇ 70ರಷ್ಟಿದ್ದ ಬಡತನದ ಪ್ರಮಾಣ ಈಗ ಶೇ 27ಕ್ಕೆ ಇಳಿದಿದೆ. ಎಲ್ಲವೂ ಸಂವಿಧಾನದಿಂದ ಸಾಧ್ಯವಾಗಿವೆ’ ಎಂದು ತಿಳಿಸಿದರು.