ಗುಬ್ಬಿ: ತಾಲ್ಲೂಕಿನ ಹಾಗಲವಾಡಿ ಹೋಬಳಿ ಚಿತ್ರದೇವರಹಟ್ಟಿ ಎಂಬ ಕುಗ್ರಾಮದ ಕೀರ್ತಿಕುಚೇಲ ಎಂಬುವವರು ಸಂತಶಿಶುನಾಳ ಶರೀಫರ ‘ಕೋಡಗಾನ ಕೋಳಿ ನುಂಗಿತ್ತಾ’ ಗೀತೆಯ ದಾಟಿಯಲ್ಲಿ ಹಾಡನ್ನು ರಚಿಸಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಆ ಹಾಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೊರೊನಾ ಸೋಂಕಿನಿಂದ ಸಮಾಜದ ವಿವಿಧ ವಲಯಗಳ ಮೇಲೆ ಉಂಟಾಗಿರುವ ಪರಿಣಾಮವನ್ನು ಹಾಡಿನ ಮೂಲಕ ಕಟ್ಟಿಕೊಟ್ಟಿದ್ದು ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
14 ವರ್ಷದ ಹಿಂದೆ ಸಿನಿಮಾ ರಂಗದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡು ಹಳ್ಳಿಯನ್ನು ತೊರೆದ ಇವರು, ಸದ್ಯಕ್ಕೆ ಬೆಂಗಳೂರಿನ ಗಾಂಧಿ ನಗರದಲ್ಲಿ, ಸಹ ನಿರ್ದೆಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಇವರ ಈ ಕೆಲಸಕ್ಕೆ ಸ್ನೇಹಿತರಾದ ಕುಚೇಲ, ಸುರೇಶ್, ಶರಣ, ಅಲಮೇಲು, ಕೃಷ್ಣ, ರಾಘವೇಂದ್ರ, ಗಣೇಶ್ ಧ್ವನಿಗೂಡಿಸಿ ಸಹಕರಿದ್ದಾರೆ.