ಪ್ರಕರಣ ಹಿನ್ನೆಲೆ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮಡಕಶಿರಾ ತಾಲ್ಲೂಕು ಅಮರಾಪುರ ಮಂಡಲ್ನ ಹನುಮಂತನಹಳ್ಳಿ ಗ್ರಾಮದ ನಿವಾಸಿ ಕೃಷ್ಣಮೂರ್ತಿ. ಈತನ ಮಾವನ ಊರು ಶಿರಾ ತಾಲ್ಲೂಕು ಬೀರನಹಳ್ಳಿ ಗ್ರಾಮ. ಹೆಂಡತಿ ಮತ್ತು ಮಕ್ಕಳನ್ನು ತನ್ನೊಂದಿಗೆ ಕಳುಹಿಸಿಕೊಟ್ಟಿಲ್ಲ ಎಂಬ ಕಾರಣಕ್ಕೆ ಮಾವ ನಿಂಗಣ್ಣ ಮತ್ತು ಅತ್ತೆ ಲಕ್ಷ್ಮಮ್ಮ ಅವರ ಮೇಲೆ 2017ರ ಅಕ್ಟೋಬರ್ 25ರ ರಾತ್ರಿ 1.30ರ ಹೊತ್ತಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ.