ಕಳೆದ ಹಿಂಗಾರು ಹಂಗಾಮಿನಲ್ಲಿ ಉತ್ತಮ ಹದ ಮಳೆಯಾದ ಪರಿಣಾಮ ರಾಗಿ, ನವಣೆ, ಸಾಮೆ ಸೇರಿದಂತೆ ಇತರ ಧಾನ್ಯಗಳು ಹುಲುಸಾಗಿ ಬೆಳೆದಿದ್ದವು. ನವಣೆ, ಸಾಮೆ ಬೆಳೆಗಳನ್ನು ರಸ್ತೆ ಸೇರಿದಂತೆ ಅಲ್ಲಿ ಇಲ್ಲಿ ಒಕ್ಕಲನ್ನು ಮಾಡಿ ಈಗಾಗಲೇ ಬಹುತೇಕ ರೈತರು ಕಾಳು ಬೇರ್ಪಡಿಸಿಕೊಂಡಿದ್ದರು. ಇನ್ನೂ ರಾಗಿ ಉತ್ತಮ ಫಸಲು ಬಂದ ರಸ್ತೆಗಳಲ್ಲಿ ಒಕ್ಕಲು ಅಸಾಧ್ಯವಾದ ಕಾರಣ ನಾಲ್ಕೈದು ಮಂದಿ ರೈತರು ಗುಂಪು ಮಾಡಿಕೊಂಡು ಕಣ ಮಾಡಿ ಅಲ್ಲಿ ಒಕ್ಕಲು ಮಾಡಲು ಮುಂದಾಗಿದ್ದರು. ಇನ್ನೂ ಕೆಲ ರೈತರು ಒಕ್ಕಲು ಮಾಡಲು ಕಣದಲ್ಲಿ ಹರಡಿದ್ದರು.