ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪಾವಗಡ | ಹಾಳಾದ ರಸ್ತೆಗಳು: ಗಡಿನಾಡ ಜನರಿಗೆ ಪ್ರಯಾಣ ಪ್ರಯಾಸ

Published : 2 ಡಿಸೆಂಬರ್ 2024, 7:06 IST
Last Updated : 2 ಡಿಸೆಂಬರ್ 2024, 7:06 IST
ಫಾಲೋ ಮಾಡಿ
Comments
ಪಾವಗಡ ತಾಲ್ಲೂಕು ಕ್ಯಾತಗಾನಕೆರೆ-ತಿಮ್ಮಮ್ಮನಹಳ್ಳಿ ರಸ್ತೆ
ಪಾವಗಡ ತಾಲ್ಲೂಕು ಕ್ಯಾತಗಾನಕೆರೆ-ತಿಮ್ಮಮ್ಮನಹಳ್ಳಿ ರಸ್ತೆ
₹10 ಕೋಟಿ ವೆಚ್ಚದ ಐದು ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ₹20 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಸೋಲಾರ್ ಪಾರ್ಕ್ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ₹11 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಅನಿಲ್ ಕುಮಾರ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಿಡಬ್ಲ್ಯೂಡಿ
ತಾಲ್ಲೂಕಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಆದ್ಯತೆ ಮೇರೆಗೆ ಹೆಚ್ಚಿನ ಅನುದಾನ ಮಂಜೂರು ಮಾಡಬೇಕು ಭಾಸ್ಕರ್ ಮುಗುದಾಳಬೆಟ್ಟ ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಶಾಲೆ ಕಾಲೇಜು ಆಸ್ಪತ್ರೆ ಸೇರಿದಂತೆ ಪಟ್ಟಣಕ್ಕೆ ಬರುವವರಿಗೆ ವಿವಿಧೆಡೆಯಿಂದ ಗ್ರಾಮಗಳಿಗೆ ಬರುವ ಜನರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು.
ಅನಂತಯ್ಯ ಮಾಜಿ ಸೈನಿಕ ಕೆ.ಟಿ. ಹಳ್ಳಿ
ದೊಮ್ಮತಮರಿಯಿಂದ ಮಡಕಶಿರಾಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಚರಿಸುವವರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಶೀಘ್ರ ರಸ್ತೆ ದುರಸ್ತಿ ಮಾಡಿ ಜನರ ಜೀವ ಕಾಪಾಡಬೇಕು ಬಾಬಾಜಾನ್ ಮುರಾರಾಯನಹಳ್ಳಿ ನಾಲ್ಕು ವರ್ಷದಿಂದ ತುಮಕುಂಟೆ ಗೇಟ್ ಬಳಿ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವಂತೆ ಮನವಿ ಮಾಡಲಾಗಿದೆ. ಸಾಕಷ್ಟು ಅಪಘಾತಗಳು ನಡೆದಿವೆ. ಮಳೆ ಬಂದರೆ ಓಡಾಡಲೂ ಸಾಧ್ಯವಾಗುವುದಿಲ್ಲ. ಮಂಗಳವಾಡದ ಕೆರೆ ಕೋಡಿ ನೀರು ಇದೇ ರಸ್ತೆಯ ಮೇಲೆ ಹೋಗುತ್ತದೆ. ಸೂಕ್ತ ಸೇತುವೆ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಹಾಳಾಗಿದೆ.
ಮಂಜುನಾಥ್ ಅರಸೀಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT