ತುಮಕೂರು: ತುಮಕೂರು ಉಪವಿಭಾಗದ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಲ್ಲಿರುವ ರಸಗೊಬ್ಬರ ಅಂಗಡಿಗಳ ಮೇಲೆ ಕೃಷಿ ಆಧಿಕಾರಿಗಳು ಕ್ಷಿಪ್ರ ದಾಳಿ ನಡೆಸಿದ್ದಾರೆ.
ಈ ವೇಳೆ ರಸಗೊಬ್ಬರ ಮಾರಾಟದಲ್ಲಿ ಲೋಪ ಕಂಡು ಬಂದ 34 ಅಂಗಡಿ ಮಾಲೀಕರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಗಂಭೀರ ಲೋಪವೆಸಗಿದ 6 ಮಾರಾಟಗಾರರಿಗೆ ಸ್ಥಳದಳಲ್ಲಿಯೇ ಮಾರಾಟ ತಡೆ ಅದೇಶ ಜಾರಿ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಇದೇ ಲೋಪವೆಸಗಿದರೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು.
ಇದೇ ರೀತಿ ಜಿಲ್ಲೆಯ ವಿವಿಧೆಡೆ ಅನಿರೀಕ್ಷಿತ ದಾಳಿ ಮುಂದುವರೆಯಲಿದ್ದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಪಿ.ಓ.ಎಸ್ ಬಿಲ್ ನೀಡದೇ ಇರುವುದು ಹಾಗೂ ಅಕ್ರಮ ದಾಸ್ತಾನು ಮೂಲಕ ರೈತರಿಗೆ ತೊಂದರೆಯಾದರೆ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಸಿದರು.