<p><strong>ಮಧುಗಿರಿ</strong>: ಕರ್ತವ್ಯ ಲೋಪ, ಭ್ರಷ್ಟಾಚಾರ ಹಾಗೂ ದುರ್ನಡತೆ ಆರೋಪದ ಮೇಲೆ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಗಂಗಾಧರ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.</p>.<p>2023ರ ಡಿಸೆಂಬರ್ 14ರಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯ ಜಾಗೃತದಳದ ಅಧಿಕಾರಿಗಳಿಗೆ ಚಿಕಿತ್ಸೆ ನೀಡಲು ಡಾ.ಗಂಗಾಧರ ಅವರು ಹಣ ಪಡೆದಿದ್ದಾರೆ ಎಂದು ಎ.ಲಹರಿಕ ಹಾಗೂ ಎಸ್.ಕೆ.ರಂಗನಾಥ್ ಅವರು ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಜಾಗೃತ ಅಧಿಕಾರಿಗಳು ವರದಿ ನೀಡಿದ್ದು, ಇದರ ಆಧಾರದ ಮೇಲೆ ಡಾ.ಗಂಗಾಧರ ಅವರನ್ನು ಅಮಾನತುಗೊಳಿಸಲಾಗಿದೆ.</p>.<p><strong>ಏನಿದು ಪ್ರಕರಣ:</strong> ಡಾ.ಗಂಗಾಧರ ಅವರು ಲಹರಿಕಾ ಅವರ ದೃಷ್ಟಿ ಪರಿಶೀಲಿಸಿ, ಕನ್ನಡಕ ಧರಿಸುವುದು ಸೂಕ್ತವೆಂದು ಸಲಹೆ ನೀಡಿ ನಂತರ ಅವರೆ ಕನ್ನಡಕ ತಂದುಕೊಟ್ಟು ₹1,300 ಪಡೆದಿದ್ದರು ಎಂದು ಲಹರಿಕಾ ಲಿಖಿತವಾಗಿ ದೂರು ನೀಡಿದ್ದರು. ನಂತರ ಡಾ.ಗಂಗಾಧರ ಪಡದ ಹಣವನ್ನು ಹಿಂದಿರುಗಿಸಿದ್ದರು. ದೂರುದಾರರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಪಡೆದು ಕನ್ನಡಕ ಒದಗಿಸಿ, ಸರ್ಕಾರಿ ಕಚೇರಿಯನ್ನು ಲಾಭಕ್ಕಾಗಿ ಬಳಸಿಕೊಂಡಿರುವುದು ಸಾಬೀತಾಗಿತ್ತು.</p>.<p>ಮತ್ತೊಂದು ಪ್ರಕರಣದಲ್ಲಿ ಹನುಮಕ್ಕ ಎಂಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಕ ಒದಗಿಸಲು ಲಂಚ ಪಡೆದಿದ್ದು, ಸರಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿಲ್ಲವೆಂದು ರೋಗಿ ಸಂಬಂಧಿ ಎಸ್.ಕೆ. ರಂಗನಾಥ್ ಜಾಗೃತಾಧಿಕಾರಿಗೆ ದೂರು ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಧುಗಿರಿ</strong>: ಕರ್ತವ್ಯ ಲೋಪ, ಭ್ರಷ್ಟಾಚಾರ ಹಾಗೂ ದುರ್ನಡತೆ ಆರೋಪದ ಮೇಲೆ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಗಂಗಾಧರ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.</p>.<p>2023ರ ಡಿಸೆಂಬರ್ 14ರಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯ ಜಾಗೃತದಳದ ಅಧಿಕಾರಿಗಳಿಗೆ ಚಿಕಿತ್ಸೆ ನೀಡಲು ಡಾ.ಗಂಗಾಧರ ಅವರು ಹಣ ಪಡೆದಿದ್ದಾರೆ ಎಂದು ಎ.ಲಹರಿಕ ಹಾಗೂ ಎಸ್.ಕೆ.ರಂಗನಾಥ್ ಅವರು ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಜಾಗೃತ ಅಧಿಕಾರಿಗಳು ವರದಿ ನೀಡಿದ್ದು, ಇದರ ಆಧಾರದ ಮೇಲೆ ಡಾ.ಗಂಗಾಧರ ಅವರನ್ನು ಅಮಾನತುಗೊಳಿಸಲಾಗಿದೆ.</p>.<p><strong>ಏನಿದು ಪ್ರಕರಣ:</strong> ಡಾ.ಗಂಗಾಧರ ಅವರು ಲಹರಿಕಾ ಅವರ ದೃಷ್ಟಿ ಪರಿಶೀಲಿಸಿ, ಕನ್ನಡಕ ಧರಿಸುವುದು ಸೂಕ್ತವೆಂದು ಸಲಹೆ ನೀಡಿ ನಂತರ ಅವರೆ ಕನ್ನಡಕ ತಂದುಕೊಟ್ಟು ₹1,300 ಪಡೆದಿದ್ದರು ಎಂದು ಲಹರಿಕಾ ಲಿಖಿತವಾಗಿ ದೂರು ನೀಡಿದ್ದರು. ನಂತರ ಡಾ.ಗಂಗಾಧರ ಪಡದ ಹಣವನ್ನು ಹಿಂದಿರುಗಿಸಿದ್ದರು. ದೂರುದಾರರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಪಡೆದು ಕನ್ನಡಕ ಒದಗಿಸಿ, ಸರ್ಕಾರಿ ಕಚೇರಿಯನ್ನು ಲಾಭಕ್ಕಾಗಿ ಬಳಸಿಕೊಂಡಿರುವುದು ಸಾಬೀತಾಗಿತ್ತು.</p>.<p>ಮತ್ತೊಂದು ಪ್ರಕರಣದಲ್ಲಿ ಹನುಮಕ್ಕ ಎಂಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಕ ಒದಗಿಸಲು ಲಂಚ ಪಡೆದಿದ್ದು, ಸರಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿಲ್ಲವೆಂದು ರೋಗಿ ಸಂಬಂಧಿ ಎಸ್.ಕೆ. ರಂಗನಾಥ್ ಜಾಗೃತಾಧಿಕಾರಿಗೆ ದೂರು ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>