<p>ಶಿರಾ: ನಗರದ ಜಾಜಮ್ಮನಕಟ್ಟೆಯಲ್ಲಿ ಜೈವಿಕ ತಂತ್ರಜ್ಞಾನವನ್ನು ಬಳಸಿಕೊಂಡು ನೀರನ್ನು ನೈಸರ್ಗಿವಾಗಿ ಶುದ್ಧೀಕರಿಸುವ ವಿನೂತನ ಪ್ರಯೋಗಕ್ಕೆ ಶುಕ್ರವಾರ ಶಾಸಕ ಟಿ.ಬಿ.ಜಯಚಂದ್ರ ಚಾಲನೆ ನೀಡಿದರು.</p>.<p>ತಮಿಳುನಾಡಿನ ‘ಮಿರಾಕಲ್ ಇನ್ ವಾಟರ್ ಸಲ್ಯೂಷನ್’ ಕಂಪನಿ ಸಹಯೋಗದಲ್ಲಿ 15 ದಿನ ಪ್ರಾಯೋಗಿಕವಾಗಿ ಯೋಜನೆ ರೂಪಿಸಿದ್ದಾರೆ.</p>.<p>ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ನಗರದ ಜಾಜಮ್ಮನಕಟ್ಟೆಯಲ್ಲಿ ನಡೆಯುವ 15 ದಿನಗಳ ಪ್ರಾಯೋಗಿಕ ಪರೀಕ್ಷೆಯ ಸಾಧಕ– ಭಾದಕಗಳನ್ನು ಗಮನಿಸಿ ಯೋಜನೆ ಯಶಸ್ವಿಯಾದರೆ ಶಿರಾ ನಗರ ಸೇರಿದಂತೆ ರಾಜ್ಯದ ಇತರೆಡೆಗೆ ವಿಸ್ತರಿಸಲಾಗುವುದು ಎಂದರು.</p>.<p>ನೀರಿನಲ್ಲಿರುವ ಪಾಚಿ, ಫಂಗಸ್, ರಾಸಾಯನಿಕ ವಸ್ತುಗಳು ಸೇರಿದಂತೆ ನಿರುಪಯುಕ್ತ ವಸ್ತುಗಳನ್ನು ನಾಶಪಡಿಸಿ ನೀರನ್ನು ನೈಸರ್ಗಿವಾಗಿ ಶುದ್ಧೀಕರಿಸುವ ಕೆಲಸ ಮಾಡಲಾಗುವುದು. ಇದರಿಂದಾಗಿ ಸೊಳ್ಳೆಗಳ ನಿರ್ಮೂಲನೆ ಜೊತೆಗೆ ನೀರು ಒಂದೇ ಕಡೆ ಸಂಗ್ರಹವಾಗಿ ದುರ್ವಾಸಬೆ ಬರುವುದನ್ನು ತಡೆಯಬಹುದಾಗಿದೆ. ಉತ್ತಮ ಪರಿಸರ ನಿರ್ಮಾಣಕ್ಕೂ ಅನುಕೂಲವಾಗುವುದು ಎಂದರು.</p>.<p>ಕಂಪನಿಯ ವ್ಯವಸ್ಥಾಪಕ ಸ್ಟೀಪನ್ ರಾಜ್ ಮಾತನಾಡಿ, ‘ಬೆಸಿಲಿಸ್ ಕನ್ಸೋಲ್ಟಿಯಂ’ ಎನ್ನುವ ಬ್ಯಾಕ್ಟೀರಿಯವನ್ನು ನೀರಿಗೆ ಸೇರಿಸುವ ಮೂಲಕ ನೈಸರ್ಗಿಕವಾಗಿ ನೀರನ್ನು ಶುದ್ಧೀಕರಿಸಬಹುದಾಗಿದೆ ಎಂದು ಹೇಳಿದರು.</p>.<p>ತಮಿಳುನಾಡಿನ ವಿವಿಧ ಕಡೆ ಯೋಜನೆ ಈಗಾಗಲೇ ಯಶಸ್ವಿಯಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಚರಂಡಿ, ಸಾರ್ವಜನಿಕ ಶೌಚಾಲಯ ಸೇರಿದಂತೆ ನೀರು ಸಂಗ್ರಹವಾಗುವ ಎಲ್ಲ ಕಡೆ ಬಳಕೆ ಮಾಡಬಹುದಾಗಿದೆ ಎಂದರು.</p>.<p>ಕಂಪನಿ ಸ್ವಂತ ಖರ್ಚಿನಲ್ಲಿ 15 ದಿನ ನಗರಸಭೆ ತೋರಿಸಿದ ಕಡೆ ಪ್ರಾಯೋಗಿಕವಾಗಿ ಶುದ್ಧೀಕರಿಸುವ ಕೆಲಸ ಮಾಡುವ ಮೂಲಕ ಯೋಜನೆಯನ್ನು ಮನದಟ್ಟು ಮಾಡಿಕೊಡಲಾಗುವುದು ಎಂದರು.</p>.<p>ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮೆಹಮೂದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಸದಸ್ಯರಾದ ಆರ್.ರಾಮು, ಬಿ.ಎಂ.ರಾಧಾಕೃಷ್ಣ, ಆರ್.ರಾಘವೇಂದ್ರ, ಸ್ವಾತಿ ಮಂಜೇಶ್, ಆಶ್ರಮ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್, ಸೊರೆಕುಂಟೆ ಸತ್ಯನಾರಾಯಣ, ನರೇಶ್ ಗೌಡ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಾ: ನಗರದ ಜಾಜಮ್ಮನಕಟ್ಟೆಯಲ್ಲಿ ಜೈವಿಕ ತಂತ್ರಜ್ಞಾನವನ್ನು ಬಳಸಿಕೊಂಡು ನೀರನ್ನು ನೈಸರ್ಗಿವಾಗಿ ಶುದ್ಧೀಕರಿಸುವ ವಿನೂತನ ಪ್ರಯೋಗಕ್ಕೆ ಶುಕ್ರವಾರ ಶಾಸಕ ಟಿ.ಬಿ.ಜಯಚಂದ್ರ ಚಾಲನೆ ನೀಡಿದರು.</p>.<p>ತಮಿಳುನಾಡಿನ ‘ಮಿರಾಕಲ್ ಇನ್ ವಾಟರ್ ಸಲ್ಯೂಷನ್’ ಕಂಪನಿ ಸಹಯೋಗದಲ್ಲಿ 15 ದಿನ ಪ್ರಾಯೋಗಿಕವಾಗಿ ಯೋಜನೆ ರೂಪಿಸಿದ್ದಾರೆ.</p>.<p>ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ನಗರದ ಜಾಜಮ್ಮನಕಟ್ಟೆಯಲ್ಲಿ ನಡೆಯುವ 15 ದಿನಗಳ ಪ್ರಾಯೋಗಿಕ ಪರೀಕ್ಷೆಯ ಸಾಧಕ– ಭಾದಕಗಳನ್ನು ಗಮನಿಸಿ ಯೋಜನೆ ಯಶಸ್ವಿಯಾದರೆ ಶಿರಾ ನಗರ ಸೇರಿದಂತೆ ರಾಜ್ಯದ ಇತರೆಡೆಗೆ ವಿಸ್ತರಿಸಲಾಗುವುದು ಎಂದರು.</p>.<p>ನೀರಿನಲ್ಲಿರುವ ಪಾಚಿ, ಫಂಗಸ್, ರಾಸಾಯನಿಕ ವಸ್ತುಗಳು ಸೇರಿದಂತೆ ನಿರುಪಯುಕ್ತ ವಸ್ತುಗಳನ್ನು ನಾಶಪಡಿಸಿ ನೀರನ್ನು ನೈಸರ್ಗಿವಾಗಿ ಶುದ್ಧೀಕರಿಸುವ ಕೆಲಸ ಮಾಡಲಾಗುವುದು. ಇದರಿಂದಾಗಿ ಸೊಳ್ಳೆಗಳ ನಿರ್ಮೂಲನೆ ಜೊತೆಗೆ ನೀರು ಒಂದೇ ಕಡೆ ಸಂಗ್ರಹವಾಗಿ ದುರ್ವಾಸಬೆ ಬರುವುದನ್ನು ತಡೆಯಬಹುದಾಗಿದೆ. ಉತ್ತಮ ಪರಿಸರ ನಿರ್ಮಾಣಕ್ಕೂ ಅನುಕೂಲವಾಗುವುದು ಎಂದರು.</p>.<p>ಕಂಪನಿಯ ವ್ಯವಸ್ಥಾಪಕ ಸ್ಟೀಪನ್ ರಾಜ್ ಮಾತನಾಡಿ, ‘ಬೆಸಿಲಿಸ್ ಕನ್ಸೋಲ್ಟಿಯಂ’ ಎನ್ನುವ ಬ್ಯಾಕ್ಟೀರಿಯವನ್ನು ನೀರಿಗೆ ಸೇರಿಸುವ ಮೂಲಕ ನೈಸರ್ಗಿಕವಾಗಿ ನೀರನ್ನು ಶುದ್ಧೀಕರಿಸಬಹುದಾಗಿದೆ ಎಂದು ಹೇಳಿದರು.</p>.<p>ತಮಿಳುನಾಡಿನ ವಿವಿಧ ಕಡೆ ಯೋಜನೆ ಈಗಾಗಲೇ ಯಶಸ್ವಿಯಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಚರಂಡಿ, ಸಾರ್ವಜನಿಕ ಶೌಚಾಲಯ ಸೇರಿದಂತೆ ನೀರು ಸಂಗ್ರಹವಾಗುವ ಎಲ್ಲ ಕಡೆ ಬಳಕೆ ಮಾಡಬಹುದಾಗಿದೆ ಎಂದರು.</p>.<p>ಕಂಪನಿ ಸ್ವಂತ ಖರ್ಚಿನಲ್ಲಿ 15 ದಿನ ನಗರಸಭೆ ತೋರಿಸಿದ ಕಡೆ ಪ್ರಾಯೋಗಿಕವಾಗಿ ಶುದ್ಧೀಕರಿಸುವ ಕೆಲಸ ಮಾಡುವ ಮೂಲಕ ಯೋಜನೆಯನ್ನು ಮನದಟ್ಟು ಮಾಡಿಕೊಡಲಾಗುವುದು ಎಂದರು.</p>.<p>ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮೆಹಮೂದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಸದಸ್ಯರಾದ ಆರ್.ರಾಮು, ಬಿ.ಎಂ.ರಾಧಾಕೃಷ್ಣ, ಆರ್.ರಾಘವೇಂದ್ರ, ಸ್ವಾತಿ ಮಂಜೇಶ್, ಆಶ್ರಮ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್, ಸೊರೆಕುಂಟೆ ಸತ್ಯನಾರಾಯಣ, ನರೇಶ್ ಗೌಡ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>