ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿಕಾಂತ್ ಹಾಗೂ ಪಿ.ಪೂಜಾ ಆಕಾಂಕ್ಷಿಯಾಗಿದ್ದಾರೆ. ಶಾಸಕ ಟಿ.ಬಿ.ಜಯಚಂದ್ರ ಅವರ ಒಲವು ಯಾರತ್ತ ಇದೆ ಎನ್ನುವುದು ಸ್ಪಷ್ಟವಾಗಿಲ್ಲ. ಇಬ್ಬರೂ ತೀವ್ರ ಲಾಬಿ ನಡೆಸುತ್ತಿದ್ದಾರೆ. ಇದುವರೆಗೂ ಅಧ್ಯಕ್ಷರಾಗಿದ್ದ ಅಂಜಿನಪ್ಪ ಬೋವಿ ಸಮಾಜಕ್ಕೆ ಸೇರಿದ್ದು ಮತ್ತೆ ಅದೇ ಸಮುದಾಯಕ್ಕೆ ಅವಕಾಶ ನೀಡುವ ಬದಲು ಮಾದಿಗ ಸಮುದಾಯದ ಲಕ್ಷ್ಮಿಕಾಂತ್ ಅವರಿಗೆ ಅವಕಾಶ ನೀಡುವಂತೆ ಕೆಲವರು ಶಾಸಕರಿಗೆ ಮನವಿ ಮಾಡಿದರೆ, ಮತ್ತೆ ಕೆಲವರು ಬೋವಿ ಸಮಾಜದ ಪಿ.ಪೂಜಾ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.