<p><strong>ತುಮಕೂರು</strong>: ಪಾರ್ಟ್ಟೈಮ್ ಕೆಲಸದ ಆಮಿಷಕ್ಕೆ ಒಳಗಾಗಿ ಕುಣಿಗಲ್ ಪಟ್ಟಣದ ಹೊಸ ಬಡಾವಣೆಯ ಎಂಜಿನಿಯರ್ ಕೆ.ಜೆ.ನಿಖಿಲ್ ₹19.34 ಲಕ್ಷ ಕಳೆದುಕೊಂಡಿದ್ದಾರೆ.</p>.<p>ಮೆಸೇಜ್ ಮಾಡಿದ ಸೈಬರ್ ಆರೋಪಿಗಳು ಪಾರ್ಟ್ಟೈಮ್ ಕೆಲಸದ ಬಗ್ಗೆ ತಿಳಿಸಿದ್ದಾರೆ. ಪ್ರಾರಂಭದಲ್ಲಿ ಲಿಂಕ್ನಲ್ಲಿ ಕಳುಹಿಸಿದ ಚಿತ್ರಗಳಿಗೆ ರಿವೀವ್ ನೀಡಿದರೆ ಒಂದಕ್ಕೆ ₹30 ಕಮಿಷನ್ ನೀಡುತ್ತಿದ್ದರು. ದಿನಕ್ಕೆ ₹809 ಕಮಿಷನ್ ಹಣ ಎಂದು ಪಾವತಿಸಿದ್ದರು. ಇದಾದ ನಂತರ REALTORS CIRCLE 3349 ಎಂಬ ಟೆಲಿಗ್ರಾಮ್ ಗ್ರೂಪ್ಗೆ ನಿಖಿಲ್ ನಂಬರ್ ಸೇರಿಸಿದ್ದಾರೆ.</p>.<p>ಸದರಿ ಗ್ರೂಪ್ನಲ್ಲಿ ಟಾಸ್ಕ್ಗಳಿಗೆ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ನಿಖಿಲ್ ಮೊದಲಿಗೆ ₹10 ಸಾವಿರ ಹೂಡಿಕೆ ಮಾಡಿದ್ದು, ಅವರ ಖಾತೆಗೆ ವಾಪಸ್ ₹15,100 ವರ್ಗಾಯಿಸಿದ್ದಾರೆ. ನಂತರ ₹30,879 ಸಾವಿರ ವರ್ಗಾಯಿಸಿದ್ದು, ₹40,787 ಮರಳಿಸಿದ್ದಾರೆ. ಇನ್ನೂ ದೊಡ್ಡ ಮೊತ್ತದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ.</p>.<p>ವಾಟ್ಸ್ ಆ್ಯಪ್ನಲ್ಲಿ ಬ್ಯಾಂಕ್ ಖಾತೆಯ ವಿವರ ಕಳುಹಿಸಿದ್ದರು. ಸೈಬರ್ ಆರೋಪಿಗಳ ಮಾತು ನಂಬಿದ ನಿಖಿಲ್ ಹಂತ ಹಂತವಾಗಿ ಒಟ್ಟು ₹19,93,869 ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರ ಖಾತೆಗೆ ₹59,421 ಬಂದಿದೆ. ಹೂಡಿಕೆ ಮಾಡಿದ ಹಣ ವಾಪಸ್ ಕೊಡುವಂತೆ ಕೇಳಿದಾಗ ಇನ್ನೂ ₹15 ಲಕ್ಷ ಹಾಕಿದರೆ ಮಾತ್ರ ಹಣ ನೀಡಲಾಗುವುದು ಎಂದಿದ್ದಾರೆ. ಇದರಿಂದ ಅನುಮಾನ ಬಂದು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಪಾರ್ಟ್ಟೈಮ್ ಕೆಲಸದ ಆಮಿಷಕ್ಕೆ ಒಳಗಾಗಿ ಕುಣಿಗಲ್ ಪಟ್ಟಣದ ಹೊಸ ಬಡಾವಣೆಯ ಎಂಜಿನಿಯರ್ ಕೆ.ಜೆ.ನಿಖಿಲ್ ₹19.34 ಲಕ್ಷ ಕಳೆದುಕೊಂಡಿದ್ದಾರೆ.</p>.<p>ಮೆಸೇಜ್ ಮಾಡಿದ ಸೈಬರ್ ಆರೋಪಿಗಳು ಪಾರ್ಟ್ಟೈಮ್ ಕೆಲಸದ ಬಗ್ಗೆ ತಿಳಿಸಿದ್ದಾರೆ. ಪ್ರಾರಂಭದಲ್ಲಿ ಲಿಂಕ್ನಲ್ಲಿ ಕಳುಹಿಸಿದ ಚಿತ್ರಗಳಿಗೆ ರಿವೀವ್ ನೀಡಿದರೆ ಒಂದಕ್ಕೆ ₹30 ಕಮಿಷನ್ ನೀಡುತ್ತಿದ್ದರು. ದಿನಕ್ಕೆ ₹809 ಕಮಿಷನ್ ಹಣ ಎಂದು ಪಾವತಿಸಿದ್ದರು. ಇದಾದ ನಂತರ REALTORS CIRCLE 3349 ಎಂಬ ಟೆಲಿಗ್ರಾಮ್ ಗ್ರೂಪ್ಗೆ ನಿಖಿಲ್ ನಂಬರ್ ಸೇರಿಸಿದ್ದಾರೆ.</p>.<p>ಸದರಿ ಗ್ರೂಪ್ನಲ್ಲಿ ಟಾಸ್ಕ್ಗಳಿಗೆ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ನಿಖಿಲ್ ಮೊದಲಿಗೆ ₹10 ಸಾವಿರ ಹೂಡಿಕೆ ಮಾಡಿದ್ದು, ಅವರ ಖಾತೆಗೆ ವಾಪಸ್ ₹15,100 ವರ್ಗಾಯಿಸಿದ್ದಾರೆ. ನಂತರ ₹30,879 ಸಾವಿರ ವರ್ಗಾಯಿಸಿದ್ದು, ₹40,787 ಮರಳಿಸಿದ್ದಾರೆ. ಇನ್ನೂ ದೊಡ್ಡ ಮೊತ್ತದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ.</p>.<p>ವಾಟ್ಸ್ ಆ್ಯಪ್ನಲ್ಲಿ ಬ್ಯಾಂಕ್ ಖಾತೆಯ ವಿವರ ಕಳುಹಿಸಿದ್ದರು. ಸೈಬರ್ ಆರೋಪಿಗಳ ಮಾತು ನಂಬಿದ ನಿಖಿಲ್ ಹಂತ ಹಂತವಾಗಿ ಒಟ್ಟು ₹19,93,869 ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರ ಖಾತೆಗೆ ₹59,421 ಬಂದಿದೆ. ಹೂಡಿಕೆ ಮಾಡಿದ ಹಣ ವಾಪಸ್ ಕೊಡುವಂತೆ ಕೇಳಿದಾಗ ಇನ್ನೂ ₹15 ಲಕ್ಷ ಹಾಕಿದರೆ ಮಾತ್ರ ಹಣ ನೀಡಲಾಗುವುದು ಎಂದಿದ್ದಾರೆ. ಇದರಿಂದ ಅನುಮಾನ ಬಂದು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>