ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ರಕ್ಷಣೆ; ಸಿದ್ಧರಬೆಟ್ಟದಲ್ಲಿ ಸೀಡ್‌ಬಾಲ್ ಅಭಿಯಾನ

Last Updated 20 ಜುಲೈ 2019, 14:15 IST
ಅಕ್ಷರ ಗಾತ್ರ

ತುಮಕೂರು: ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರು ಜಾಗೃತಿ ವಹಿಸಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದಲ್ಲಿ ರೋಗಗಳಿಂದ ಮುಕ್ತಿ ಹೊಂದಬಹುದು ಎಂದು ನಗರದ ಫಿಟ್ನೋಹಿಲಿಕ್ ಜಿಮ್‌ ಮುಖ್ಯಸ್ಥೆ ಶರ್ಮಿಳಾ ಅಮರ್‌ ತಿಳಿಸಿದರು.

ಪರಿಸರ ರಕ್ಷಣೆ ಕುರಿತು ಜಿಮ್‌ನ 17 ಸದಸ್ಯರು ಸಿದ್ಧರಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಸೀಡ್‌ಬಾಲ್ ಅಭಿಯಾನದಲ್ಲಿ ಮಾತನಾಡಿದರು. ಬೇವಿನ ಸಸಿ ಮತ್ತು ಪಪ್ಪಾಯಿ ಸಸಿಗಳ 200ಕ್ಕೂ ಸೀಡ್‌ಬಾಲ್‌ಗಳ ಬೆಟ್ಟಕ್ಕೆ ಎಸೆಯಲಾಯಿತು.

ಸಸಿಗಳನ್ನು ನೆಡುವ ಮೂಲಕ ಆರೋಗ್ಯದ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು. ಪರಿಸರದ ಬಗ್ಗೆ ಹೆಚ್ಚು ಮೌಲ್ಯವಾದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪರಿಸರದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು ಎಂದರು. ಜಿಮ್‌ನ ಸದಸ್ಯರು ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT