ತುಮಕೂರು: ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿಯ ಬೀಚನಹಳ್ಳಿ ಬಳಿ ಬುಧವಾರ ಹೊಲದಲ್ಲಿ ಹಸು ಮೇಯಿಸುವಾಗ ಹೆಜ್ಜೇನು ದಾಳಿ ನಡೆಸಿದ್ದು ರೈತರಾಮಣ್ಣ ಮೃತಪಟ್ಟಿದ್ದಾರೆ.
ರಾಮಣ್ಣ ಬೀಚನಹಳ್ಳಿ ಗ್ರಾಮದ ನಿವಾಸಿ. ತಮ್ಮ ಜಮೀನಿನಲ್ಲಿ ಹಸು ಮೇಯಸುತ್ತಿರುವ ಸಮಯದಲ್ಲಿ ಹೆಜ್ಜೇನು ದಾಳಿ ನಡೆಸಿದ್ದು, ತೀವ್ರವಾಗಿ ಅಸ್ವಸ್ಥರಾದ ರಾಮಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.