ಕೆರೆಯಲ್ಲಿ ನೀರಿದ್ದ ಸಮಯದಲ್ಲಿ ಮೀನುಗಳನ್ನು ಹರಾಜು ಮಾಡಿ ಲಾಭ ಪಡೆಯುವ ಮೀನುಗಾರಿಕೆ ಇಲಾಖೆ, ಈಗ ಕೆರೆಯಲ್ಲಿ ಮೀನುಗಳು ಸಾಯುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಗ್ರಾಮದಲ್ಲಿ ದುರ್ವಾಸೆ ಬೀರುತ್ತಿದೆ. ಗ್ರಾಮ ಪಂಚಾಯಿತಿ ಅವರು ನಮಗೂ, ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ದೂರು ನೀಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ, ನಮ್ಮ ನೋವು ಕೇಳುವರು ಯಾರು ಇಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.