ತುಮಕೂರು: ಮಹಾನಗರ ಪಾಲಿಕೆ ಸದಸ್ಯರಾಗಿ ಐವರು ನಾಮಕರಣಗೊಂಡಿದ್ದು, ಅವರಿಗೆ ಸ್ವಾಗತ ಕೋರಲಾಯಿತು.
ನೂತನ ನಾಮನಿರ್ದೇಶಿತ ಸದಸ್ಯರಾದ ಡಿ.ಎ. ಮೋಹನ್, ಕೆ.ಎನ್. ಶಿವರಾಜು, ನರಸಿಂಹಸ್ವಾಮಿ, ತ್ಯಾಗರಾಜಸ್ವಾಮಿ, ವಿಶ್ವನಾಥ್ ಅವರನ್ನು ಶಾಸಕ ಜ್ಯೋತಿಗಣೇಶ್ ಸ್ವಾಗತಿಸಿದರು.
‘ನಗರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಚುನಾಯಿತ ಸದಸ್ಯರ ಜತೆಗೆ ಜಿದ್ದಿಗೆ ಬೀಳದೆ, ಅವರಿಗೆ ಪೂರಕವಾಗಿ ಕೆಲಸ ಮಾಡುವ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರ ನೀಡಬೇಕು’ ಎಂದು ಸಲಹೆ ಮಾಡಿದರು.
ಕಳೆದ 45 ದಿನಗಳ ಹಿಂದೆಯೇ ಸರ್ಕಾರ ಸದಸ್ಯರನ್ನು ನೇಮಕ ಮಾಡಿತ್ತು. ಆದರೆ, ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ನಗರಪಾಲಿಕೆಗೆ ಪರಿಚಯಿಸಲು ಸಾಧ್ಯವಾಗಿರಲಿಲ್ಲ ಎಂದರು.