ತುಮಕೂರು: ಹೆಬ್ಬೂರು ಠಾಣೆಯಲ್ಲಿ ಮದ್ಯ ಸೇವಿಸಿ ಜೂಜಾಟದಲ್ಲಿ ತೊಡಗಿದ್ದ ವೇಳೆ ಪರಸ್ಪರ ಹೊಡೆದಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಐ ರಾಮಚಂದ್ರಪ್ಪ, ಠಾಣೆ ರೈಟರ್ ದೇವರಾಜ್, ಚಾಲಕ ಸಂತೋಷ್, ಕಾನ್ಸ್ಟೆಬಲ್ ಮಹೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅಮಾನತುಗೊಳಿಸಿದ್ದಾರೆ.