<p><strong>ಕುಣಿಗಲ್:</strong> ಪಟ್ಟಣದ ಜಿಕೆಬಿಎಂಎಸ್ ಬಯಲುರಂಗ ಮಂದಿರದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಷ್ಠಾಪಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.</p>.<p>ಆಗಸ್ಟ್ 27ರಂದು ಪಟ್ಟಣವನ್ನು ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಪ್ರತಿಷ್ಠಾಪಿಸಲಾಗಿದ್ದ ನರಸಿಂಹಾವತಾರದ ಗಣೇಶ ಮೂರ್ತಿಗೆ ನಿತ್ಯ ಪೂಜೆ, ಸಂಜೆ ವಿವಿಧ ಕಾರ್ಯಕ್ರಮಗಳಿಂದ ಭಕ್ತರ ಮನಸಿಗೆ ಮುದ ನೀಡಿದ ಕಾರ್ಯಕ್ರಮಗಳು ಜತೆಗೆ ಸ್ಥಳೀಯ ಕಲಾವಿದರಿಗೆ, ಸಂಘಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲಾಗಿತ್ತು.</p>.<p>ಶೋಭಾಯಾತ್ರೆಗೆ ದೇಶಭಕ್ತರ ಸ್ತಬ್ಧ ಚಿತ್ರ, ಬೃಹತ್ ಭಜರಂಗಿ, ಜನಪದ ಕಲಾತಂಡಗಳು ಮೆರಗು ತಂದರೆ ತಮಟೆ, ನಾಸಿಕ್ ಡೋಲ್, ಚಂಡೆ ಮದ್ದಳೆಗೆ ಯುವಕ, ಯುವತಿಯರ ಕುಣಿದು ಕುಪ್ಪಳಿಸಿದರು.</p>.<p>ಗ್ರಾಮ ದೇವತೆ ವೃತ್ತ, ಕೋಟೆ ಪ್ರದೇಶ ಮತ್ತು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಶೋಭಾಯಾತ್ರೆ ಬಂದಾಗ ಮುಸ್ಲಿಮರು ಗಣೇಶನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ನೀರು, ತಂಪು ಪಾನೀಯ ಮತ್ತು ಹಣ್ಣುಗಳನ್ನು ವಿತರಿಸಿದರು.</p>.<p>ಶಾಸಕ ಡಾ.ರಂಗನಾಥ್, ಮಾಜಿ ಸಚಿವ ಡಿ.ನಾಗರಾಜಯ್ಯ, ಬಿಜೆಪಿ ಮುಖಂಡ ರಾಜೇಶ್ ಗೌಡ, ಜೆಡಿಎಸ್ ಮುಖಂಡ ಬಿ.ಎನ್. ಜಗದೀಶ್, ಬಜರಂಗದಳದ ಗಣೇಶೋತ್ಸವದ ಸಂಚಾಲಕ ಸತೀಶ್, ಜಗದೀಶ್, ಪುರುಷೋತ್ತಮ್ ಸೇರಿದಂತೆ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ಕೊತ್ತಗೆರೆ ಕೆರೆಯಲ್ಲಿ ಗಣೇಶನ ಮೂರ್ತಿ ವಿಸರ್ಜಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್:</strong> ಪಟ್ಟಣದ ಜಿಕೆಬಿಎಂಎಸ್ ಬಯಲುರಂಗ ಮಂದಿರದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಷ್ಠಾಪಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.</p>.<p>ಆಗಸ್ಟ್ 27ರಂದು ಪಟ್ಟಣವನ್ನು ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಪ್ರತಿಷ್ಠಾಪಿಸಲಾಗಿದ್ದ ನರಸಿಂಹಾವತಾರದ ಗಣೇಶ ಮೂರ್ತಿಗೆ ನಿತ್ಯ ಪೂಜೆ, ಸಂಜೆ ವಿವಿಧ ಕಾರ್ಯಕ್ರಮಗಳಿಂದ ಭಕ್ತರ ಮನಸಿಗೆ ಮುದ ನೀಡಿದ ಕಾರ್ಯಕ್ರಮಗಳು ಜತೆಗೆ ಸ್ಥಳೀಯ ಕಲಾವಿದರಿಗೆ, ಸಂಘಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲಾಗಿತ್ತು.</p>.<p>ಶೋಭಾಯಾತ್ರೆಗೆ ದೇಶಭಕ್ತರ ಸ್ತಬ್ಧ ಚಿತ್ರ, ಬೃಹತ್ ಭಜರಂಗಿ, ಜನಪದ ಕಲಾತಂಡಗಳು ಮೆರಗು ತಂದರೆ ತಮಟೆ, ನಾಸಿಕ್ ಡೋಲ್, ಚಂಡೆ ಮದ್ದಳೆಗೆ ಯುವಕ, ಯುವತಿಯರ ಕುಣಿದು ಕುಪ್ಪಳಿಸಿದರು.</p>.<p>ಗ್ರಾಮ ದೇವತೆ ವೃತ್ತ, ಕೋಟೆ ಪ್ರದೇಶ ಮತ್ತು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಶೋಭಾಯಾತ್ರೆ ಬಂದಾಗ ಮುಸ್ಲಿಮರು ಗಣೇಶನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ನೀರು, ತಂಪು ಪಾನೀಯ ಮತ್ತು ಹಣ್ಣುಗಳನ್ನು ವಿತರಿಸಿದರು.</p>.<p>ಶಾಸಕ ಡಾ.ರಂಗನಾಥ್, ಮಾಜಿ ಸಚಿವ ಡಿ.ನಾಗರಾಜಯ್ಯ, ಬಿಜೆಪಿ ಮುಖಂಡ ರಾಜೇಶ್ ಗೌಡ, ಜೆಡಿಎಸ್ ಮುಖಂಡ ಬಿ.ಎನ್. ಜಗದೀಶ್, ಬಜರಂಗದಳದ ಗಣೇಶೋತ್ಸವದ ಸಂಚಾಲಕ ಸತೀಶ್, ಜಗದೀಶ್, ಪುರುಷೋತ್ತಮ್ ಸೇರಿದಂತೆ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ಕೊತ್ತಗೆರೆ ಕೆರೆಯಲ್ಲಿ ಗಣೇಶನ ಮೂರ್ತಿ ವಿಸರ್ಜಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>