<p><strong>ತುಮಕೂರು</strong>: ಗೌರಿ ಹಬ್ಬದ ಸಂಭ್ರಮಾಚರಣೆಗೆ ಜಿಲ್ಲೆಯ ಜನ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು, ನಗರದ ವಿವಿಧೆಡೆ ಸೋಮವಾರ ಗೌರಮ್ಮ ಮೂರ್ತಿಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಹೂವು ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿಸಲು ಮುಂದಾದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತು.</p>.<p>ಬಿ.ಎಚ್.ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ, ಚಿಕ್ಕಪೇಟೆ ಸೇರಿ ನಗರದ ಪ್ರಮುಖ ರಸ್ತೆ, ವೃತ್ತಗಳ ಬಳಿ ಗೌರಿ–ಗಣೇಶ ಮೂರ್ತಿ ಮಾರಾಟ ಮಾಡಲಾಗುತ್ತಿದೆ. ಭಾನುವಾರ ಸಂಜೆಯಿಂದ ಮೂರ್ತಿ ಖರೀದಿಸಲಾಗುತ್ತಿದೆ. ಎರಡು ದಿನ ಮುಂಚಿತವಾಗಿಯೇ ಹಬ್ಬದ ಸಂಭ್ರಮ ಕಳೆಗಟ್ಟಿದೆ.</p>.<p>ಮಹಿಳೆಯರು ಗೌರಿ ಮೂರ್ತಿ, ಮೊರ, ಬಳೆ, ಹಣ್ಣು, ಮಾವಿನ ಎಲೆ, ಬಾಳೆ ದಿಂಡು, ವಿವಿಧ ಬಗೆಯ ಹೂವು, ತಳಿರು–ತೋರಣ ಇತರೆ ಸಾಮಗ್ರಿ ಖರೀದಿಸಿದರು. ಮನೆ, ದೇಗುಲಗಳಲ್ಲಿ ಹಬ್ಬಕ್ಕೆ ತಯಾರಿ ನಡೆದಿದೆ. </p>.<p>ಕನಕಾಂಬರ ₹4 ಸಾವಿರ: ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕೆ.ಜಿ 150ರಿಂದ ₹200 ಇದ್ದ ಗುಲಾಬಿ ಸೋಮವಾರ ₹300ರಿಂದ ₹400ಕ್ಕೆ ಏರಿಕೆಯಾಗಿತ್ತು. ಕೆ.ಜಿ ಮಲ್ಲಿಗೆ ₹1 ಸಾವಿರದಿಂದ ₹2 ಸಾವಿರ, ಕನಕಾಂಬರ ಕೆ.ಜಿ ₹4 ಸಾವಿರ ಮುಟ್ಟಿದೆ.</p>.<p>ಕೆ.ಜಿ ಸೇವಂತಿಗೆ ₹350, ಕಾಕಡ ₹700 ಇತ್ತು. ಮಾರುಕಟ್ಟೆಯ ಹೊರಗಡೆ ಚಿಲ್ಲರೆಯಾಗಿ ಇದಕ್ಕಿಂತ ಹೆಚ್ಚಿನ ಬೆಲೆಗೆ ಹೂವು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಹೂವಿನ ಬೆಲೆ ಕೇಳಿ ಮಾರುಕಟ್ಟೆಯಿಂದ ಬರಿಗೈನಲ್ಲಿ ವಾಪಸ್ ಆಗುತ್ತಿದ್ದ ದೃಶ್ಯ ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಗೌರಿ ಹಬ್ಬದ ಸಂಭ್ರಮಾಚರಣೆಗೆ ಜಿಲ್ಲೆಯ ಜನ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು, ನಗರದ ವಿವಿಧೆಡೆ ಸೋಮವಾರ ಗೌರಮ್ಮ ಮೂರ್ತಿಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಹೂವು ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿಸಲು ಮುಂದಾದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತು.</p>.<p>ಬಿ.ಎಚ್.ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ, ಚಿಕ್ಕಪೇಟೆ ಸೇರಿ ನಗರದ ಪ್ರಮುಖ ರಸ್ತೆ, ವೃತ್ತಗಳ ಬಳಿ ಗೌರಿ–ಗಣೇಶ ಮೂರ್ತಿ ಮಾರಾಟ ಮಾಡಲಾಗುತ್ತಿದೆ. ಭಾನುವಾರ ಸಂಜೆಯಿಂದ ಮೂರ್ತಿ ಖರೀದಿಸಲಾಗುತ್ತಿದೆ. ಎರಡು ದಿನ ಮುಂಚಿತವಾಗಿಯೇ ಹಬ್ಬದ ಸಂಭ್ರಮ ಕಳೆಗಟ್ಟಿದೆ.</p>.<p>ಮಹಿಳೆಯರು ಗೌರಿ ಮೂರ್ತಿ, ಮೊರ, ಬಳೆ, ಹಣ್ಣು, ಮಾವಿನ ಎಲೆ, ಬಾಳೆ ದಿಂಡು, ವಿವಿಧ ಬಗೆಯ ಹೂವು, ತಳಿರು–ತೋರಣ ಇತರೆ ಸಾಮಗ್ರಿ ಖರೀದಿಸಿದರು. ಮನೆ, ದೇಗುಲಗಳಲ್ಲಿ ಹಬ್ಬಕ್ಕೆ ತಯಾರಿ ನಡೆದಿದೆ. </p>.<p>ಕನಕಾಂಬರ ₹4 ಸಾವಿರ: ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕೆ.ಜಿ 150ರಿಂದ ₹200 ಇದ್ದ ಗುಲಾಬಿ ಸೋಮವಾರ ₹300ರಿಂದ ₹400ಕ್ಕೆ ಏರಿಕೆಯಾಗಿತ್ತು. ಕೆ.ಜಿ ಮಲ್ಲಿಗೆ ₹1 ಸಾವಿರದಿಂದ ₹2 ಸಾವಿರ, ಕನಕಾಂಬರ ಕೆ.ಜಿ ₹4 ಸಾವಿರ ಮುಟ್ಟಿದೆ.</p>.<p>ಕೆ.ಜಿ ಸೇವಂತಿಗೆ ₹350, ಕಾಕಡ ₹700 ಇತ್ತು. ಮಾರುಕಟ್ಟೆಯ ಹೊರಗಡೆ ಚಿಲ್ಲರೆಯಾಗಿ ಇದಕ್ಕಿಂತ ಹೆಚ್ಚಿನ ಬೆಲೆಗೆ ಹೂವು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಹೂವಿನ ಬೆಲೆ ಕೇಳಿ ಮಾರುಕಟ್ಟೆಯಿಂದ ಬರಿಗೈನಲ್ಲಿ ವಾಪಸ್ ಆಗುತ್ತಿದ್ದ ದೃಶ್ಯ ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>