<p><strong>ಹುಳಿಯಾರು:</strong> ಗಾಂಧಿಯನ್ ಕಲೆಕ್ಟಿವ್ ಇಂಡಿಯಾ ಸಂಘಟನೆ ಸದಸ್ಯೆ ಎನ್.ಇಂದಿರಮ್ಮ ಅವರು ಕಂದಿಕೆರೆ ಬಳಿಯ ತೋಟದಲ್ಲಿ ಬುಧವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.</p>.<p>ದೇಶದ ಗಾಂಧಿ ಅನುಯಾಯಿಗಳು ಕೋಟ್ಯಂತರ ಮಂದಿ ಸಂಕಷ್ಟದಲ್ಲಿರುವಾಗ ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯಲು ಈ ಸತ್ಯಾಗ್ರಹ ನಡೆಸಿದರು.</p>.<p>ಜೂನ್ 5ರಿಂದ ಪರಿಸರ ದಿನದಿಂದ ಅಕ್ಟೋಬರ್ 2ರ ವಿಶ್ವ ಶಾಂತಿ ದಿನದವರೆಗೆ ಒಬ್ಬೊಬ್ಬರು ಒಂದೊಂದು ದಿನದಂತೆ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.</p>.<p>ಎನ್.ಇಂದಿರಮ್ಮ ಮಾತನಾಡಿ, ‘ಬಹುತೇಕ ಬಡವರು ಉಪವಾಸ ಇರುವಾಗ ನಾವು ಸುಮ್ಮನಿರುವುದು ಸರಿಯಲ್ಲ. ಸತ್ಯಾಗ್ರಹದ ಮುಖ್ಯ ಆಶಯ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ರೈತರು, ಹಳ್ಳಿಗಳ ಆರ್ಥಿಕತೆ ಮತ್ತು ಪರಿಸರವನ್ನು ಸಂರಕ್ಷಣೆ ಮಾಡುತ್ತಾ ಗಾಂಧಿ ಕನಸಿನ ಸ್ವರಾಜ್ಯ ಕಟ್ಟುವುದು. ವಲಸೆ ಕಾರ್ಮಿಕರಿಗೆ ₹5 ಸಾವಿರ ಆರ್ಥಿಕ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.</p>.<p>ಗಾಂಧಿಯನ್ ಕಲೆಕ್ಟಿವ್ ಇಂಡಿಯಾ ಸಂಘಟನೆ ಸದಸ್ಯ ರಾಮಕೃಷ್ಣಪ್ಪ, ಹೊಯ್ಸಳಕಟ್ಟೆ ಯುವ ಮುಖಂಡ ಗಿರೀಶ್, ಡಾ.ಸಿ.ಎಸ್.ರಂಗನಾಥ್, ಕಾರ್ಮಿಕ ಸಂಘಟನೆಯ ಮೈಲಾರಪ್ಪ, ಶ್ರೀಧರ, ಮಲ್ಲಪ್ಪ, ರವಿ, ಸಂಸ್ಕರಣ ಘಟಕದ ಗಂಗಮ್ಮ, ಬೋರಮ್ಮ, ಸುಶೀಲಮ್ಮ, ಲಕ್ಷ್ಮಮ್ಮ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಳಿಯಾರು:</strong> ಗಾಂಧಿಯನ್ ಕಲೆಕ್ಟಿವ್ ಇಂಡಿಯಾ ಸಂಘಟನೆ ಸದಸ್ಯೆ ಎನ್.ಇಂದಿರಮ್ಮ ಅವರು ಕಂದಿಕೆರೆ ಬಳಿಯ ತೋಟದಲ್ಲಿ ಬುಧವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.</p>.<p>ದೇಶದ ಗಾಂಧಿ ಅನುಯಾಯಿಗಳು ಕೋಟ್ಯಂತರ ಮಂದಿ ಸಂಕಷ್ಟದಲ್ಲಿರುವಾಗ ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯಲು ಈ ಸತ್ಯಾಗ್ರಹ ನಡೆಸಿದರು.</p>.<p>ಜೂನ್ 5ರಿಂದ ಪರಿಸರ ದಿನದಿಂದ ಅಕ್ಟೋಬರ್ 2ರ ವಿಶ್ವ ಶಾಂತಿ ದಿನದವರೆಗೆ ಒಬ್ಬೊಬ್ಬರು ಒಂದೊಂದು ದಿನದಂತೆ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.</p>.<p>ಎನ್.ಇಂದಿರಮ್ಮ ಮಾತನಾಡಿ, ‘ಬಹುತೇಕ ಬಡವರು ಉಪವಾಸ ಇರುವಾಗ ನಾವು ಸುಮ್ಮನಿರುವುದು ಸರಿಯಲ್ಲ. ಸತ್ಯಾಗ್ರಹದ ಮುಖ್ಯ ಆಶಯ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ರೈತರು, ಹಳ್ಳಿಗಳ ಆರ್ಥಿಕತೆ ಮತ್ತು ಪರಿಸರವನ್ನು ಸಂರಕ್ಷಣೆ ಮಾಡುತ್ತಾ ಗಾಂಧಿ ಕನಸಿನ ಸ್ವರಾಜ್ಯ ಕಟ್ಟುವುದು. ವಲಸೆ ಕಾರ್ಮಿಕರಿಗೆ ₹5 ಸಾವಿರ ಆರ್ಥಿಕ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.</p>.<p>ಗಾಂಧಿಯನ್ ಕಲೆಕ್ಟಿವ್ ಇಂಡಿಯಾ ಸಂಘಟನೆ ಸದಸ್ಯ ರಾಮಕೃಷ್ಣಪ್ಪ, ಹೊಯ್ಸಳಕಟ್ಟೆ ಯುವ ಮುಖಂಡ ಗಿರೀಶ್, ಡಾ.ಸಿ.ಎಸ್.ರಂಗನಾಥ್, ಕಾರ್ಮಿಕ ಸಂಘಟನೆಯ ಮೈಲಾರಪ್ಪ, ಶ್ರೀಧರ, ಮಲ್ಲಪ್ಪ, ರವಿ, ಸಂಸ್ಕರಣ ಘಟಕದ ಗಂಗಮ್ಮ, ಬೋರಮ್ಮ, ಸುಶೀಲಮ್ಮ, ಲಕ್ಷ್ಮಮ್ಮ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>