ದೇವಾಲಯದ ಮುಂಭಾಗದಿಂದ ಉತ್ಸವ ಸಾಗುವ ಹಾದಿಯ ಉದ್ದಕ್ಕೂ ಭಕ್ತರಿಗೆ ಬಾಳೆ ಕಂದು ನೆಟ್ಟು ವಿವಿಧ ಪುಷ್ಪಗಳಿಂದ ಅಲಂಕರಿಸಿ, ಬಣ್ಣ ಬಣ್ಣದ ರಂಗೋಲಿ ಹಾಕಲಾಗಿತ್ತು. ಉತ್ಸವವು ಮುಂದೆ ಸಾಗಿದಂತೆ ಭಕ್ತರು ಪೂಜೆ ಸಲ್ಲಿಸಿ ಬಾಳೆಯ ಕಂದು ಕಡಿದು ಹರಕೆ ತೀರಿಸಿದರು. ಮೆರವಣಿಗೆಯು ಬುಧವಾರ ಬೆಳಿಗ್ಗೆ ಚಿಕ್ಕಗುಬ್ಬಿಯಪ್ಪ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಭಕ್ತರಿಗೆ ಪೂಜೆ ಸಲ್ಲಿಸಲು ಅನುಕೂಲವಾಗುವ ದೇವರ ಮೂರ್ತಿ ಗದ್ದುಗೆ ಮಾಡಲಾಯಿತು.