<p><strong>ಕೊಡಿಗೇನಹಳ್ಳಿ</strong>: ಹೋಬಳಿಯಲ್ಲಿನ ಗುಟ್ಟೆ ಗ್ರಾಮದ ಆಂಜನೇಯ ಹೂವಿನ ರಥೋತ್ಸವ ಶನಿವಾರ ರಾತ್ರಿ ವೈಭವಯುತವಾಗಿ ನಡೆಯಿತು.</p>.<p>ಜಿಲ್ಲೆ ಹಾಗೂ ನೆರೆಯ ಆಂಧ್ರದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಸಿಡಿಮದ್ದುಗಳ ಪ್ರದರ್ಶನ, ಕಲಾ ತಂಡಗಳ ಮೆರವಣಿಗೆ ಉತ್ಸವಕ್ಕೆ ವಿಶೇಷ ಮೆರುಗು ತಂದಿತು. ರಥೋತ್ಸವದ ಅಂಗವಾಗಿ ದೇವಸ್ಥಾನ ಹಾಗೂ ರಥ ಸಾಗುವ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.</p>.<p>ಶನಿವಾರ ಮಧ್ಯರಾತ್ರಿ 1 ಗಂಟೆಗೆ ಅಲಂಕೃತಗೊಂಡ ದೇವರನ್ನು ಮೆರವಣಿಗೆಯಲ್ಲಿ ತೇರಿನ ಬಳಿ ಕರೆದೊಯ್ಯಲಾಯಿತು. ಈ ವೇಳೆ ಭಕ್ತರು ಪ್ರತಿ ಮೆಟ್ಟಿಲ ಬಳಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ದೇವರನ್ನು ತೇರಿನಲ್ಲಿ ಕೂರಿಸಿ, ಮಹಾಮಂಗಳಾರತಿ ನೆರವೇರಿಸಿದ ನಂತರ ಬೀದಿಯಲ್ಲಿ ಹೂವಿನ ತೇರನ್ನು ಎಳೆಯಲಾಯಿತು. </p>.<p>ಭಾನುವಾರ ಬೆಳಗ್ಗೆಯೂ ತೇರನ್ನು ಮತ್ತೊಮ್ಮೆ ಎಳೆಯಲಾಯಿತು. ಮಧ್ಯಾಹ್ನ ಮತ್ತೆ ತೇರು ನಿಗದಿತ ಸ್ಥಳಕ್ಕೆ ವಾಪಸ್ಸಾಗುವುದರೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು. ರಥೋತ್ಸವದ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿಶೇಷವಾಗಿ ಮಲ್ಲಿಗೆ ಹೂಗಳಿಂದ ಸಿಂಗರಿಸಿದ ತೇರಿನಲ್ಲಿ ಆಂಜನೇಯ ಮೆರವಣಿಗೆ ನಡೆಸುವುದು ವೈಶಿಷ್ಟ್ಯವಾಗಿದೆ.</p>.<p>ಜಿ.ಎಚ್. ನಾಗರಾಜರಾವ್, ಎಸ್.ನಂಜುಂಡಪ್ಪ, ಹನುಮಂತರಾಯಪ್ಪ, ಗೋವಿಂದಪ್ಪ, ಜಿ.ಆರ್. ಚೆನ್ನವೀರಯ್ಯ, ಎಚ್.ಅಶ್ವತ್ಥಪ್ಪ, ಪಿ.ನಾರಾಯಣಪ್ಪ, ಗುಂ. ಗಂಗಾಧರಪ್ಪ, ಶ್ರೀರಂಗನಾಯಕ, ಮಾರುತಿ, ರಾಮಕೃಷ್ಣಪ್ಪ, ನರಸಪ್ಪ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಡಿಗೇನಹಳ್ಳಿ</strong>: ಹೋಬಳಿಯಲ್ಲಿನ ಗುಟ್ಟೆ ಗ್ರಾಮದ ಆಂಜನೇಯ ಹೂವಿನ ರಥೋತ್ಸವ ಶನಿವಾರ ರಾತ್ರಿ ವೈಭವಯುತವಾಗಿ ನಡೆಯಿತು.</p>.<p>ಜಿಲ್ಲೆ ಹಾಗೂ ನೆರೆಯ ಆಂಧ್ರದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಸಿಡಿಮದ್ದುಗಳ ಪ್ರದರ್ಶನ, ಕಲಾ ತಂಡಗಳ ಮೆರವಣಿಗೆ ಉತ್ಸವಕ್ಕೆ ವಿಶೇಷ ಮೆರುಗು ತಂದಿತು. ರಥೋತ್ಸವದ ಅಂಗವಾಗಿ ದೇವಸ್ಥಾನ ಹಾಗೂ ರಥ ಸಾಗುವ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.</p>.<p>ಶನಿವಾರ ಮಧ್ಯರಾತ್ರಿ 1 ಗಂಟೆಗೆ ಅಲಂಕೃತಗೊಂಡ ದೇವರನ್ನು ಮೆರವಣಿಗೆಯಲ್ಲಿ ತೇರಿನ ಬಳಿ ಕರೆದೊಯ್ಯಲಾಯಿತು. ಈ ವೇಳೆ ಭಕ್ತರು ಪ್ರತಿ ಮೆಟ್ಟಿಲ ಬಳಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ದೇವರನ್ನು ತೇರಿನಲ್ಲಿ ಕೂರಿಸಿ, ಮಹಾಮಂಗಳಾರತಿ ನೆರವೇರಿಸಿದ ನಂತರ ಬೀದಿಯಲ್ಲಿ ಹೂವಿನ ತೇರನ್ನು ಎಳೆಯಲಾಯಿತು. </p>.<p>ಭಾನುವಾರ ಬೆಳಗ್ಗೆಯೂ ತೇರನ್ನು ಮತ್ತೊಮ್ಮೆ ಎಳೆಯಲಾಯಿತು. ಮಧ್ಯಾಹ್ನ ಮತ್ತೆ ತೇರು ನಿಗದಿತ ಸ್ಥಳಕ್ಕೆ ವಾಪಸ್ಸಾಗುವುದರೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು. ರಥೋತ್ಸವದ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿಶೇಷವಾಗಿ ಮಲ್ಲಿಗೆ ಹೂಗಳಿಂದ ಸಿಂಗರಿಸಿದ ತೇರಿನಲ್ಲಿ ಆಂಜನೇಯ ಮೆರವಣಿಗೆ ನಡೆಸುವುದು ವೈಶಿಷ್ಟ್ಯವಾಗಿದೆ.</p>.<p>ಜಿ.ಎಚ್. ನಾಗರಾಜರಾವ್, ಎಸ್.ನಂಜುಂಡಪ್ಪ, ಹನುಮಂತರಾಯಪ್ಪ, ಗೋವಿಂದಪ್ಪ, ಜಿ.ಆರ್. ಚೆನ್ನವೀರಯ್ಯ, ಎಚ್.ಅಶ್ವತ್ಥಪ್ಪ, ಪಿ.ನಾರಾಯಣಪ್ಪ, ಗುಂ. ಗಂಗಾಧರಪ್ಪ, ಶ್ರೀರಂಗನಾಯಕ, ಮಾರುತಿ, ರಾಮಕೃಷ್ಣಪ್ಪ, ನರಸಪ್ಪ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>