ತುಮಕೂರು: ‘ಪರೀಕ್ಷಾ ಕೇಂದ್ರದಲ್ಲಿ ಗಾಬರಿಯಾಗದೆ, ನನಗೆ ಎಲ್ಲ ಉತ್ತರ ಗೊತ್ತು ಎಂಬಂತೆ ಮನಸ್ಸಿಟ್ಟು, ಖುಷಿ ಪಟ್ಟು, ನಗುತ್ತಾ ಪರೀಕ್ಷೆ ಬರೆದು ಬಿಡಿ’ ಎಂದು ಸಂಪನ್ಮೂಲ ವ್ಯಕ್ತಿ ಸಿ.ಸಿ.ಪಾವಟೆ ವಿದ್ಯಾರ್ಥಿಗಳಲ್ಲಿ ಶಕ್ತಿ ತುಂಬಿದರು.
ಪ್ರೇರಣಾ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ‘ಪೋಷಕರೇ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಮಕ್ಕಳಲ್ಲಿ ಪೋಷಕರು ನಕಾರಾತ್ಮಕ ಅಂಶಗಳನ್ನು ತುಂಬುತ್ತಾರೆ. ಬಡತನದಿಂದ ಹೊರ ಬರಲು ಜ್ಞಾನ ಸಂಪಾದನೆಯೊಂದೇ ನಮಗಿರುವ ದಾರಿ. ಮಕ್ಕಳಲ್ಲಿ ಆತ್ಮವಿಶ್ವಾಸ ಬಿತ್ತುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಪ್ರಮುಖ ಸಲಹೆಗಳು
* ಪರೀಕ್ಷೆಗೆ ಹೋಗುವಾಗ ಟೀ, ಕಾಫಿ ಕುಡಿಯಬಾರದು
* ಪರೀಕ್ಷೆಗೆ ಹೋಗಿ– ಬರಲು ಶಕ್ತಿಗೆ ಬೇಕಾಗುವಷ್ಟು ಆಹಾರ ಸೇವಿಸಬೇಕು
* ಪರೀಕ್ಷೆಯ ದಿನ ಪರೀಕ್ಷಾ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ಮಾಡಬಾರದು