ತುಮಕೂರು: ತಾಲ್ಲೂಕಿನ ಹೆಬ್ಬೂರಿನ ಕಾಮಾಕ್ಷಿ ಶಾರದಾದೇವಿ ಸನ್ನಿಧಿಯಲ್ಲಿ ಕಾಮಾಕ್ಷಿ ಶಾರದಾ ಪೀಠಂ, ಘನಪುರಿ ಸಂಸ್ಥಾನ ಕೋದಂಡಾಶ್ರಮಮಠದವತಿಯಿಂದ ಚಾತುರ್ಮಾಸ್ಯ ಹಾಗೂ ಋಕ್ಸಂಹಿತಾಯಾಗ ಜುಲೈ 16ರಿಂದ ಸೆಪ್ಟೆಂಬರ್ 13ರವರೆಗೆ ನಡೆಯಲಿದೆ.
ಮಠದ ಮಾಧವಾಶ್ರಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಯಾಗ ನಡೆಯಲಿದೆ.
ಜು.16ರಂದು ವ್ಯಾಸಪೂಜಾ, ಚಾತುರ್ಮಾಸ್ಯ ಸಂಕಲ್ಪ, ಜುಲೈ 17ರಂದು ಉತ್ತರಪೂಜಾ ವ್ಯಾಸಾಕ್ಷತೆ, ಜುಲೈ 28ರಿಂದ ಆಗಸ್ಟ್ 4ರವರೆಗೆ ಋಕ್ಸಂಹಿತಾಯಾಗ ನಡೆಯಲಿದೆ. ಸೆಪ್ಟೆಂಬರ್ 13ರಂದು ಚಾತುರ್ಮಾಸ್ಯ ಮುಕ್ತಾಯವಾಗಲಿದೆ.