<p><strong>ತುಮಕೂರು:</strong> ಬ್ರಾಹ್ಮಣರು ಸಂಘಟನೆಯ ಜತೆ ಜತೆಗೆ ಸಮುದಾಯದಲ್ಲಿರುವ ಅವಕಾಶ ವಂಚಿತರನ್ನು ಮೇಲಕ್ಕೆತ್ತುವ ಕೆಲಸ ಮಾಡಬೇಕು ಎಂದು ವಿಶ್ರಾಂತ ಡಿ.ಜಿ.ಪಿ ಡಾ.ಡಿ.ವಿ.ಗುರುಪ್ರಸಾದ್ ಹೇಳಿದರು.</p>.<p>ನಗರದಲ್ಲಿ ಭಾನುವಾರ ನಡೆದ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘ ದಶಮಾನೋತ್ಸವ ಸಮಾರಂಭ ಹಾಗೂ ಹೊಯ್ಸಳ ಬಾಂಧವರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಪ್ರತಿಯೊಬ್ಬ ಬ್ರಾಹ್ಮಣರು ತಮ್ಮ ಸಮುದಾಯಕ್ಕೆ ವೈಯಕ್ತಿಕವಾಗಿ ಏನು ಮಾಡಿದ್ದೇವೆ ಎಂಬುದನ್ನು ಯೋಚಿಸಬೇಕು. ಬ್ರಾಹ್ಮಣರಲ್ಲಿ ವಿದ್ಯೆ, ಅಡುಗೆ, ಶಿಕ್ಷಣ, ಪೌರೋಹಿತ್ಯ, ಅಕೌಂಟಿಂಗ್ ಹೀಗೆ ನಾನಾ ರೀತಿಯ ಪ್ರತಿಭೆ, ಕೌಶಲಗಳು ಅಡಗಿವೆ. ಈ ಕೌಶಲಗಳನ್ನು ತಮಗೆ ಮಾತ್ರವೇ ಬಳಸಿಕೊಳ್ಳದೇ ಸಮಾಜದ ಇತರರಿಗೂ ದೊರಕುವಂತೆ ಮಾಡಬೇಕು ಎಂದು ಹೇಳಿದರು.</p>.<p>ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ನಟಿ ಸುಧಾ ಬೆಳವಾಡಿ, ‘ನಾವು ನಮ್ಮ ಸ್ವಂತಿಕೆ ಮರೆತು ಜೀವಿಸುತ್ತಿದ್ದೇವೆ. ಸೂಕ್ಷ್ಮ ಮನೋಭಾವ ಕಣ್ಮರೆ ಆಗುತ್ತಿದೆ. ನಗರ ಪ್ರದೇಶಗಳಲ್ಲಿ ಮನುಷ್ಯ ಸಂಬಂಧ ದೂರವಾಗುತ್ತಿವೆ’ ಎಂದರು.</p>.<p>ಹಿರಿಯ ಮುಖಂಡ ಎಚ್.ಎನ್.ಹಿರಣ್ಣಯ್ಯ ಸ್ವಾಮಿ, ‘ಬ್ರಾಹ್ಮಣರ ಸಂಘಟನೆಯಲ್ಲಿ ತುಮಕೂರು ಜಿಲ್ಲೆ ಎಂದಿಗೂ ಹಿಂದೆ ಬಿದ್ದಿಲ್ಲ. ಬ್ರಾಹ್ಮಣರು ಸಂಘಟನೆಯಾಗಬೇಕು ಎಂಬ ಆಲೋಚನೆ ಬೆಳೆದಿದ್ದೆ ತುಮಕೂರಿನಲ್ಲಿ’ ಎಂದರು.</p>.<p>ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ರಾಮಮೂರ್ತಿ ಮಾತನಾಡಿದರು. ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಎಸ್.ರಾಘವೇಂದ್ರ ಅಧ್ಯಕ್ಷತೆ<br />ವಹಿಸಿದ್ದರು.</p>.<p>ಕಾರ್ಯದರ್ಶಿ ಕೆ.ಹಿರಿಯಣ್ಣ, ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಎನ್.ವೆಂಕಟೇಶಮೂರ್ತಿ, ಬೆಂಗಳೂರು ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಬಿ.ಚಂದ್ರಶೇಖರಯ್ಯ, ಎನ್.ಆರ್.ನಾಗರಾಜರಾವ್, ಪಾಲಿಕೆ ಸದಸ್ಯ ಸಿ.ಎನ್.ರಮೇಶ್, ಸ್ಮರಣ ಸಂಚಿಕೆ ಸಂಪಾದಕ ಟಿ.ಎಸ್.ರಾಮಶೇಷ, ನರಸಿಂಹ, ಡಿ.ಎಸ್.ಹೊನ್ನಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಬ್ರಾಹ್ಮಣರು ಸಂಘಟನೆಯ ಜತೆ ಜತೆಗೆ ಸಮುದಾಯದಲ್ಲಿರುವ ಅವಕಾಶ ವಂಚಿತರನ್ನು ಮೇಲಕ್ಕೆತ್ತುವ ಕೆಲಸ ಮಾಡಬೇಕು ಎಂದು ವಿಶ್ರಾಂತ ಡಿ.ಜಿ.ಪಿ ಡಾ.ಡಿ.ವಿ.ಗುರುಪ್ರಸಾದ್ ಹೇಳಿದರು.</p>.<p>ನಗರದಲ್ಲಿ ಭಾನುವಾರ ನಡೆದ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘ ದಶಮಾನೋತ್ಸವ ಸಮಾರಂಭ ಹಾಗೂ ಹೊಯ್ಸಳ ಬಾಂಧವರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಪ್ರತಿಯೊಬ್ಬ ಬ್ರಾಹ್ಮಣರು ತಮ್ಮ ಸಮುದಾಯಕ್ಕೆ ವೈಯಕ್ತಿಕವಾಗಿ ಏನು ಮಾಡಿದ್ದೇವೆ ಎಂಬುದನ್ನು ಯೋಚಿಸಬೇಕು. ಬ್ರಾಹ್ಮಣರಲ್ಲಿ ವಿದ್ಯೆ, ಅಡುಗೆ, ಶಿಕ್ಷಣ, ಪೌರೋಹಿತ್ಯ, ಅಕೌಂಟಿಂಗ್ ಹೀಗೆ ನಾನಾ ರೀತಿಯ ಪ್ರತಿಭೆ, ಕೌಶಲಗಳು ಅಡಗಿವೆ. ಈ ಕೌಶಲಗಳನ್ನು ತಮಗೆ ಮಾತ್ರವೇ ಬಳಸಿಕೊಳ್ಳದೇ ಸಮಾಜದ ಇತರರಿಗೂ ದೊರಕುವಂತೆ ಮಾಡಬೇಕು ಎಂದು ಹೇಳಿದರು.</p>.<p>ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ನಟಿ ಸುಧಾ ಬೆಳವಾಡಿ, ‘ನಾವು ನಮ್ಮ ಸ್ವಂತಿಕೆ ಮರೆತು ಜೀವಿಸುತ್ತಿದ್ದೇವೆ. ಸೂಕ್ಷ್ಮ ಮನೋಭಾವ ಕಣ್ಮರೆ ಆಗುತ್ತಿದೆ. ನಗರ ಪ್ರದೇಶಗಳಲ್ಲಿ ಮನುಷ್ಯ ಸಂಬಂಧ ದೂರವಾಗುತ್ತಿವೆ’ ಎಂದರು.</p>.<p>ಹಿರಿಯ ಮುಖಂಡ ಎಚ್.ಎನ್.ಹಿರಣ್ಣಯ್ಯ ಸ್ವಾಮಿ, ‘ಬ್ರಾಹ್ಮಣರ ಸಂಘಟನೆಯಲ್ಲಿ ತುಮಕೂರು ಜಿಲ್ಲೆ ಎಂದಿಗೂ ಹಿಂದೆ ಬಿದ್ದಿಲ್ಲ. ಬ್ರಾಹ್ಮಣರು ಸಂಘಟನೆಯಾಗಬೇಕು ಎಂಬ ಆಲೋಚನೆ ಬೆಳೆದಿದ್ದೆ ತುಮಕೂರಿನಲ್ಲಿ’ ಎಂದರು.</p>.<p>ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ರಾಮಮೂರ್ತಿ ಮಾತನಾಡಿದರು. ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಎಸ್.ರಾಘವೇಂದ್ರ ಅಧ್ಯಕ್ಷತೆ<br />ವಹಿಸಿದ್ದರು.</p>.<p>ಕಾರ್ಯದರ್ಶಿ ಕೆ.ಹಿರಿಯಣ್ಣ, ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಎನ್.ವೆಂಕಟೇಶಮೂರ್ತಿ, ಬೆಂಗಳೂರು ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಬಿ.ಚಂದ್ರಶೇಖರಯ್ಯ, ಎನ್.ಆರ್.ನಾಗರಾಜರಾವ್, ಪಾಲಿಕೆ ಸದಸ್ಯ ಸಿ.ಎನ್.ರಮೇಶ್, ಸ್ಮರಣ ಸಂಚಿಕೆ ಸಂಪಾದಕ ಟಿ.ಎಸ್.ರಾಮಶೇಷ, ನರಸಿಂಹ, ಡಿ.ಎಸ್.ಹೊನ್ನಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>