ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮಾಜಕ್ಕೆ ಕಂಟಕಪ್ರಾಯರಾಗುತ್ತಿದ್ದಾರೆ. ನೈತಿಕ ಮೌಲ್ಯ ಮರೆಯುತ್ತಿದ್ದಾರೆ.
ಜಿ.ನರಸಿಂಹಯ್ಯ, ತೆರಿಯೂರು
ಮೂರ್ತಿ
ಮದಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಪರಿಣಾಮ ಶಾಲೆ ಬಿಟ್ಟ ಕೆಲ ಮಕ್ಕಳು ಕೂಡ ಮದ್ಯ ಕುಡಿಯುವುದನ್ನು ಕಲಿಯುತ್ತಿರುವುದು ಆತಂಕದ ಸಂಗತಿ.
ಮೂರ್ತಿ, ಅಡವಿನಾಗೇನಹಳ್ಳಿ
ವೆಂಕಟೇಶ್
ಗ್ರಾಮೀಣ ಭಾಗದಲ್ಲಿ ಇಂದು ಕೆಲ ಯುವಕರು ಹುಟ್ಟಿದ ಹಬ್ಬ ಹಾಗೂ ಇತರೆ ಕಾರ್ಯಕ್ರಮಗಳ ನೆಪದಲ್ಲಿ ಪಾರ್ಟಿ ಮಾಡಿಕೊಂಡು ಮದ್ಯ ಹಾಗೂ ಇತರೆ ದುಶ್ಚಟಗಳತ್ತ ವಾಲುತ್ತಿದ್ದು, ಪೋಷಕರು ಎಚ್ಚರವಹಿಸಬೇಕು.
ವೆಂಕಟೇಶ್, ರೆಡ್ಡಿಹಳ್ಳಿ
ತಾಲ್ಲೂಕಿನ ಗ್ರಾಮಗಳಲ್ಲಿ ಎಲ್ಲೆಲ್ಲಿ ದೂರುಗಳು ಬಂದಿವೆಯೊ ಅಲ್ಲೆಲ್ಲ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇತರೆಡೆ ಕೂಡ ನಮ್ಮ ಸಿಬ್ಬಂದಿ ಜೊತೆ ಭೇಟಿ ನೀಡುತ್ತಿದ್ದು, ಅಕ್ರಮ ಮದ್ಯ ಮಾರಾಟ ಕಂಡುಬಂದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.