ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ ರಾಜ್ಯದ 107 ತಾಲ್ಲೂಕುಗಳನ್ನು ಬರ ಎಂದು ಸರ್ಕಾರ ಘೋಷಣೆ ಮಾಡಿದೆ. ಬರದಿಂದ ಅಂದಾಜು ₹ 16,500 ಕೋಟಿ ರಾಜ್ಯಕ್ಕೆ ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ ₹ 2434 ಕೋಟಿ ನೆರವಿಗೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ, ಕೇವಲ 949 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಬರದಿಂದ ನಷ್ಟವಾಗಿದ್ದಕ್ಕೆ ನಾವು ಕೇಳಿರಲಿಲ್ಲ. ಆದಾಗ್ಯೂ ಕೇಂದ್ರ ಸ್ಪಂದಿಸಿಲ್ಲ. ಅದೇ ಪಕ್ಕದ ಆಂಧ್ರಪ್ರದೇಶಕ್ಕೆ ₹ 4000 ಕೋಟಿ ನಷ್ಟ ಪರಿಹಾರ ಒದಗಿಸಿದೆ’ ಎಂದು ದೂರಿದರು.