ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಹಿಂದೆ ನನ್ನ ಮಗ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಜಯಚಂದ್ರ ನನ್ನ ಮಗನ ವಿರುದ್ಧ ಕೆಲಸಮಾಡಿ ಸೋಲಿಗೆ ಕಾರಣನಾದ. ಶಿರಾದಲ್ಲಿ ಇವನು ಗೆದ್ದರೆ (ಕಳೆದ ವಿಧಾನಸಭೆ ಚುನಾವಣೆ) ಅರ್ಧ ಮೀಸೆ ತೆಗೆಯುತ್ತೇನೆ ಎಂದು ಅಂದೇ ಹೇಳಿದ್ದೆ. ನಾನು ಅಷ್ಟು ಧೈರ್ಯವಾಗಿ ಹೇಳಬೇಕು ಅಂದರೆ ಅಲ್ಲಿನ ಜನರ ಪ್ರೀತಿ, ವಿಶ್ವಾಸ ನನ್ನ ಮೇಲಿತ್ತು’ ಎಂದರು.