ಕೊರಟಗೆರೆ ತಾಲ್ಲೂಕಿನ ಬೊಮ್ಮಲದೇವಿಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಆಟೊಗಳಲ್ಲಿ ಕಿಕ್ಕಿರಿದು ತುಂಬಿರುವ ವಿದ್ಯಾರ್ಥಿಗಳು
ಮುತ್ತಮ್ಮ
ಈ ವರ್ಷ ಪಿಯು ಮುಗಿದಿದೆ. ಪದವಿಗೆ ಕೊರಟಗೆರೆ ಕಾಲೇಜಿಗೆ ಸೇರಬೇಕು. ಓಡಾಡಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣಕ್ಕೆ ಮನೆಯಲ್ಲಿ ಪೋಷಕರು ಉನ್ನತ ವ್ಯಾಸಂಗಕ್ಕೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಮುತ್ತಮ್ಮ ವಿದ್ಯಾರ್ಥಿನಿ
ಬಿ.ಆರ್.ಮೇಘನಾ
ಕಾಲೇಜಿಗೆ ಹೋಗಬೇಕೆಂದರೆ ಆಟೊಗಳನ್ನೇ ಕಾಯಬೇಕು. ತರಗತಿಗೆ ಹೋಗಲೇಬೇಕು ಎಂದರೆ ಅವರು ಕೇಳಿದಷ್ಟು ಹಣ ಕೊಟ್ಟು ಹೋಗಲೇಬೇಕಾದ ಅನಿವಾರ್ಯತೆ ಇದೆ. ಶಾಲೆ ಕಾಲೇಜು ಸಮಯಕ್ಕೆ ಬಸ್ ಇದ್ದಿದ್ದರೆ ಉತ್ತಮ.
ಬಿ.ಆರ್.ಮೇಘನಾ ವಿದ್ಯಾರ್ಥಿನಿ
ದೀಕ್ಷಿತ್
ದಿನ ದುಬಾರಿ ಹಣಕೊಟ್ಟು ಆಟೊಗಳಲ್ಲಿ ಓಡಾಡಲು ಆಗುವುದಿಲ್ಲ. ದ್ವಿಚಕ್ರ ವಾಹನದಲ್ಲಿನ ಓಡಾಟವೂ ಹೊರೆಯಾಗಲಿದೆ. ಹಾಗಾಗಿ ನಿತ್ಯ ಕಾಲೇಜಿಗೆ ಹೋಗಲು 10-15 ಕಿ.ಮೀ ಪ್ರಯಾಣಿಸಲೇಬೇಕು.
ದೀಕ್ಷಿತ್ ವಿದ್ಯಾರ್ಥಿ
ರಾಮಬಾಬು
ನನಗೀಗ 65 ವರ್ಷ. ನಾವು ಚಿಕ್ಕವರಿದ್ದಾಗಿಂದಲೂ ಇಲ್ಲಿ ಸರಿಯಾಗಿ ಬಸ್ ವ್ಯವಸ್ಥೆಯಿಲ್ಲ. ಆ ಕಾರಣಕ್ಕೆ ನಮ್ಮ ಜೊತೆಯಲ್ಲಿ ಓದುತ್ತಿದ್ದ ಎಷ್ಟೊ ಜನ ಓದುವುದನ್ನೇ ಬಿಟ್ಟರು. ಈಗಲೂ ಆ ಪರಿಸ್ಥಿತಿ ಇಲ್ಲಿನ ಜನ ಹೊರತಾಗಿಲ್ಲ.
ರಾಮಬಾಬು ಬಿ.ಡಿ.ಪುರ
ಯಾವ್ಯಾವ ಊರಿಗೆ ಬಸ್ ಇಲ್ಲ
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿಯ ಅಕ್ಕಾಜಿಹಳ್ಳಿ ಚಿಕ್ಕಪಾಳ್ಯ ಅವುದಾರನಹಳ್ಳಿ ದೊಡ್ಡಪಾಳ್ಯ ಹೊಸಪಾಳ್ಯ ಚುಂಚೇನಹಳ್ಳಿ ಕರಿಚಿಕ್ಕನಹಳ್ಳಿ ಚಿಟ್ಟೇಪಲ್ಲಿಪಾಳ್ಯ ಬೊಮ್ಮಲದೇವಿಪುರ ಲಿಂಗದವೀರನಹಳ್ಳಿ ಮರಾಠಿಪಾಳ್ಯ ತಿಗಳರಪಾಳ್ಯ ಕದರಯ್ಯನಪಾಳ್ಯ ಅವಲಯ್ಯನಪಾಳ್ಯ ಮಾರುತಿ ನಗರ ಬ್ಯಾಡರಹಳ್ಳಿ ಸಿರಗೋನಹಳ್ಳಿ ಲಂಕೇನಹಳ್ಳಿ ಮುದ್ದನಹಳ್ಳಿ ಚಟ್ಟೇನಹಳ್ಳಿ ಬಿಳೇಕಲ್ಲಹಳ್ಳಿ ಗೊಡ್ರಹಳ್ಳಿ ತೊಗರಿಘಟ್ಟ ಕರಕಲಘಟ್ಟ ದುಗ್ಗೇನಹಳ್ಳಿ ಹನುಮೇನಹಳ್ಳಿ ಕೋಡ್ಲಹಳ್ಳಿ ಚಿಂಪುಗಾನಹಳ್ಳಿ ಶಕುನಿತಿಮ್ಮನಹಳ್ಳಿ ಹುಚ್ಚವೀರಯ್ಯನಪಾಳ್ಯ ತಿಮ್ಮನಹಳ್ಳಿ ಹೊನ್ನಾರನಹಳ್ಳಿ ತುಂಬುಗಾನಹಳ್ಳಿ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ.