ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್‌ ಬಳಿ 1 ಕೆಜಿ ಚಿನ್ನಾಭರಣ, ₹8 ಲಕ್ಷ ನಗದು!

Published 31 ಮೇ 2023, 15:32 IST
Last Updated 31 ಮೇ 2023, 15:32 IST
ಅಕ್ಷರ ಗಾತ್ರ

ತುಮಕೂರು: ಒಂದು ಕೆ.ಜಿ.ಗೂ ಅಧಿಕ ಚಿನ್ನಾಭರಣ, ₹8 ಲಕ್ಷಕ್ಕೂ ಹೆಚ್ಚಿನ ನಗದು ಹಾಗೂ ಸ್ಥಿರ, ಚರಾಸ್ತಿಗೆ ಸಂಬಂಧಿಸಿದ ದಾಖಲೆ, ತುಮಕೂರು ನಗರ ಸೇರಿದಂತೆ ವಿವಿಧೆಡೆ ನಿವೇಶನಗಳು, ಅಪಾರ ಪ್ರಮಾಣದ ಆಸ್ತಿಪಾಸ್ತಿ...

ಇವಿಷ್ಟು ನಗರದಲ್ಲಿರುವ ಮೈಸೂರಿನ ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎನ್.ಮೂರ್ತಿ ಮನೆ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಕಂಡು ಬಂದ ಆಸ್ತಿ ವಿವರ. ರಾತ್ರಿಯಾದರೂ ದಾಖಲೆಗಳ ಪರಿಶೀಲನೆ, ಶೋಧ ಕಾರ್ಯ, ಮುಂದುವರೆದಿದ್ದು, ಅಂತಿಮ ಆಸ್ತಿಯ ಮೌಲ್ಯ ಇನ್ನೂ ಗೊತ್ತಾಗಬೇಕಿದೆ.

ತುಮಕೂರಿನ ಆರ್.ಟಿ.ನಗರ ಸಮೀಪದ ಶಂಕರಪುರ ಡಿ ಬ್ಲಾಕ್‌ನಲ್ಲಿರುವ ಮೂರ್ತಿ ಮನೆ, ಸಮೀಪದಲ್ಲಿರುವ ಮಾವ ಹಾಗೂ ನಾದಿನಿ ಮನೆಗಳ ಮೇಲೂ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT