ತುಮಕೂರು: ಒಂದು ಕೆ.ಜಿ.ಗೂ ಅಧಿಕ ಚಿನ್ನಾಭರಣ, ₹8 ಲಕ್ಷಕ್ಕೂ ಹೆಚ್ಚಿನ ನಗದು ಹಾಗೂ ಸ್ಥಿರ, ಚರಾಸ್ತಿಗೆ ಸಂಬಂಧಿಸಿದ ದಾಖಲೆ, ತುಮಕೂರು ನಗರ ಸೇರಿದಂತೆ ವಿವಿಧೆಡೆ ನಿವೇಶನಗಳು, ಅಪಾರ ಪ್ರಮಾಣದ ಆಸ್ತಿಪಾಸ್ತಿ...
ಇವಿಷ್ಟು ನಗರದಲ್ಲಿರುವ ಮೈಸೂರಿನ ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎನ್.ಮೂರ್ತಿ ಮನೆ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಕಂಡು ಬಂದ ಆಸ್ತಿ ವಿವರ. ರಾತ್ರಿಯಾದರೂ ದಾಖಲೆಗಳ ಪರಿಶೀಲನೆ, ಶೋಧ ಕಾರ್ಯ, ಮುಂದುವರೆದಿದ್ದು, ಅಂತಿಮ ಆಸ್ತಿಯ ಮೌಲ್ಯ ಇನ್ನೂ ಗೊತ್ತಾಗಬೇಕಿದೆ.
ತುಮಕೂರಿನ ಆರ್.ಟಿ.ನಗರ ಸಮೀಪದ ಶಂಕರಪುರ ಡಿ ಬ್ಲಾಕ್ನಲ್ಲಿರುವ ಮೂರ್ತಿ ಮನೆ, ಸಮೀಪದಲ್ಲಿರುವ ಮಾವ ಹಾಗೂ ನಾದಿನಿ ಮನೆಗಳ ಮೇಲೂ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆದಿದೆ.