ನಗರದ ಶೆಟ್ಟಿಹಳ್ಳಿ ಗೇಟ್ ನಿವಾಸಿ ಅಮೂಲ್ಯ (17), ಶಿರಾ ತಾಲ್ಲೂಕಿನ ನೆಲಹಾಳ್ ಗ್ರಾಮದ ದಿಲೀಪ್ (17) ಮೃತರು. ಏ. 10ರಂದು ಅಮೂಲ್ಯ ಪೋಷಕರು ತಮ್ಮ ಮಗಳು ಕಾಣೆಯಾದ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಕಾಲೇಜಿಗೆ ಹೋಗಿದ್ದ ಅಮೂಲ್ಯ ಹಿಂದಿರುಗಿ ಬಂದಿಲ್ಲ, ದಿಲೀಪ್ ಜತೆ ಹೋಗಿರುವ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಿದ್ದರು.