<p><strong>ತೋವಿನಕೆರೆ:</strong> ಮಣುವಿನಕುರಿಕೆ ಭೈರವೇಶ್ವರ ಗ್ರಾಮಾಂತರ ಪ್ರೌಢಶಾಲೆ 38 ವರ್ಷ ಸತತವಾಗಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿ ಈ ಶೈಕ್ಷಣಿಕ ಸಾಲಿನಿಂದ ಮುಚ್ಚಿದೆ.</p>.<p>ಮಣುವಿನಕುರಿಕೆ ಗ್ರಾಮಕ್ಕೆ ಈಗಲೂ ಬಸ್ ಸೌಕರ್ಯವಿಲ್ಲ. ದಾಸಾಲುಕುಂಟೆ ಅಥವಾ ಬಂಡೆಹಳ್ಳಿ ಕ್ರಾಸ್ನಲ್ಲಿ ಇಳಿದು ಈ ಶಾಲೆಗೆ ನಡೆದುಕೊಂಡು ಹೋಗಬೇಕು. ಇಂತಹ ಸ್ಥಳದಲ್ಲಿ 1987ರಲ್ಲಿ ಪ್ರೌಢಶಾಲೆ ಸ್ಥಾಪಿಸಲಾಯಿತು.</p>.<p>ಕುರಂಕೋಟೆ ಪಂಚಾಯಿತಿ ವ್ಯಾಪ್ತಿಯ 14ಕ್ಕೂ ಹೆಚ್ಚು ಹಳ್ಳಿಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಈ ಶಾಲೆ ಅನುಕೂಲವಾಗಿತ್ತು. ಮೊದಲ 25 ವರ್ಷ 8,9 ಮತ್ತು 10ನೇ ತರಗತಿಯ 250ರಿಂದ 300 ವಿದ್ಯಾರ್ಥಿಗಳು ಶಿಕ್ಷಣ ಪಡೆದರು. ಸಮೀಪದಲ್ಲಿ ಶಾಲೆಗಳು ಪ್ರಾರಂಭವಾದ ನಂತರ ಮೂರು ತರಗತಿಗಳಿಂದ 100 ಆಸುಪಾಸಿನಲ್ಲಿ ವಿದ್ಯಾರ್ಥಿಗಳಿದ್ದರು.</p>.<p>ಕಳೆದ ವರ್ಷ ಶಾಲೆಗೆ ಜಮೀನು ದಾನ ನೀಡಿದ್ದ ದಾನಿಗಳು ಶಾಲಾ ಕಟ್ಟಡದ ಜಾಗ ಬಿಟ್ಟು ಆಟದ ಮೈದಾನ ಹಾಗೂ ಮುಂಭಾಗದಲ್ಲಿ ಉಳಿಮೆ ಮಾಡಿ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನಿಸಿದ್ದರು. ಪೋಲಿಸರು, ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು.</p>.<p>ಈ ವರ್ಷ ಮತ್ತೆ ಅದೇ ಸಮಸ್ಯೆಯಾದರೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ನಿವೃತ್ತಿಯಾದ ಮೂವರು ಶಿಕ್ಷಕರ ಜಾಗಕ್ಕೆ ಹೊಸ ಶಿಕ್ಷಕರು ಬರದೇ ಇರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ಇಷ್ಟಪಡಲಿಲ್ಲ. 8ನೇ ತರಗತಿಗೆ ವಿದ್ಯಾರ್ಥಿಗಳ ಪ್ರವೇಶ ಶೂನ್ಯವಾಯಿತು.</p>.<p>38 ವರ್ಷ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದ ಶಾಲೆ ಈಗ ಇತಿಹಾಸ ಸೇರಿತು.</p>.<p>‘ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸದ ಪೋಷಕರು ಮನೆ ಮುಂದೆ ಶಾಲೆಯಿದೆ ಬೆಳಿಗ್ಗೆ ಹೋಗಿ ಸಂಜೆಯೊಳಗೆ ಮನೆಗೆ ಮರಳುತ್ತಾರೆ ಎಂಬ ನೆಮ್ಮದಿಯಿಂದ ಕಳುಹಿಸುತ್ತಿದ್ದರು. ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಈ ಸಂಸ್ಥೆ ದಾರಿ ದೀಪವಾಯಿತು’ ಎಂದು ಮಣುವಿನಕುರಿಕೆ ಸವಿತಾ ನಾಗೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋವಿನಕೆರೆ:</strong> ಮಣುವಿನಕುರಿಕೆ ಭೈರವೇಶ್ವರ ಗ್ರಾಮಾಂತರ ಪ್ರೌಢಶಾಲೆ 38 ವರ್ಷ ಸತತವಾಗಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿ ಈ ಶೈಕ್ಷಣಿಕ ಸಾಲಿನಿಂದ ಮುಚ್ಚಿದೆ.</p>.<p>ಮಣುವಿನಕುರಿಕೆ ಗ್ರಾಮಕ್ಕೆ ಈಗಲೂ ಬಸ್ ಸೌಕರ್ಯವಿಲ್ಲ. ದಾಸಾಲುಕುಂಟೆ ಅಥವಾ ಬಂಡೆಹಳ್ಳಿ ಕ್ರಾಸ್ನಲ್ಲಿ ಇಳಿದು ಈ ಶಾಲೆಗೆ ನಡೆದುಕೊಂಡು ಹೋಗಬೇಕು. ಇಂತಹ ಸ್ಥಳದಲ್ಲಿ 1987ರಲ್ಲಿ ಪ್ರೌಢಶಾಲೆ ಸ್ಥಾಪಿಸಲಾಯಿತು.</p>.<p>ಕುರಂಕೋಟೆ ಪಂಚಾಯಿತಿ ವ್ಯಾಪ್ತಿಯ 14ಕ್ಕೂ ಹೆಚ್ಚು ಹಳ್ಳಿಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಈ ಶಾಲೆ ಅನುಕೂಲವಾಗಿತ್ತು. ಮೊದಲ 25 ವರ್ಷ 8,9 ಮತ್ತು 10ನೇ ತರಗತಿಯ 250ರಿಂದ 300 ವಿದ್ಯಾರ್ಥಿಗಳು ಶಿಕ್ಷಣ ಪಡೆದರು. ಸಮೀಪದಲ್ಲಿ ಶಾಲೆಗಳು ಪ್ರಾರಂಭವಾದ ನಂತರ ಮೂರು ತರಗತಿಗಳಿಂದ 100 ಆಸುಪಾಸಿನಲ್ಲಿ ವಿದ್ಯಾರ್ಥಿಗಳಿದ್ದರು.</p>.<p>ಕಳೆದ ವರ್ಷ ಶಾಲೆಗೆ ಜಮೀನು ದಾನ ನೀಡಿದ್ದ ದಾನಿಗಳು ಶಾಲಾ ಕಟ್ಟಡದ ಜಾಗ ಬಿಟ್ಟು ಆಟದ ಮೈದಾನ ಹಾಗೂ ಮುಂಭಾಗದಲ್ಲಿ ಉಳಿಮೆ ಮಾಡಿ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನಿಸಿದ್ದರು. ಪೋಲಿಸರು, ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು.</p>.<p>ಈ ವರ್ಷ ಮತ್ತೆ ಅದೇ ಸಮಸ್ಯೆಯಾದರೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ನಿವೃತ್ತಿಯಾದ ಮೂವರು ಶಿಕ್ಷಕರ ಜಾಗಕ್ಕೆ ಹೊಸ ಶಿಕ್ಷಕರು ಬರದೇ ಇರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ಇಷ್ಟಪಡಲಿಲ್ಲ. 8ನೇ ತರಗತಿಗೆ ವಿದ್ಯಾರ್ಥಿಗಳ ಪ್ರವೇಶ ಶೂನ್ಯವಾಯಿತು.</p>.<p>38 ವರ್ಷ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದ ಶಾಲೆ ಈಗ ಇತಿಹಾಸ ಸೇರಿತು.</p>.<p>‘ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸದ ಪೋಷಕರು ಮನೆ ಮುಂದೆ ಶಾಲೆಯಿದೆ ಬೆಳಿಗ್ಗೆ ಹೋಗಿ ಸಂಜೆಯೊಳಗೆ ಮನೆಗೆ ಮರಳುತ್ತಾರೆ ಎಂಬ ನೆಮ್ಮದಿಯಿಂದ ಕಳುಹಿಸುತ್ತಿದ್ದರು. ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಈ ಸಂಸ್ಥೆ ದಾರಿ ದೀಪವಾಯಿತು’ ಎಂದು ಮಣುವಿನಕುರಿಕೆ ಸವಿತಾ ನಾಗೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>