ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಪಾಲಿಕೆಗೆ ಬಾರದ ಅನುದಾನ

Last Updated 1 ಜುಲೈ 2020, 16:40 IST
ಅಕ್ಷರ ಗಾತ್ರ

ತುಮಕೂರು: 35ನೇ ವಾರ್ಡ್ ವ್ಯಾಪ್ತಿಯ ಖಾದರ್ ನಗರಕ್ಕೆ ಮೇಯರ್ ಫರೀದಾ ಬೇಗಂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು.

ಖಾದರ್ ನಗರದಲ್ಲಿ ಕಂದಾಯ ಭೂಮಿ ಪರಿವರ್ತನೆ ಸಮಸ್ಯೆ ಇದೆ. ಇಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಸಿದ್ಧವಾಗಿಲ್ಲ. 2ನೇ ಹಂತದ ಯುಜಿಡಿ ಯೋಜನೆ ಕೈಗೆತ್ತಿಕೊಳ್ಳದ ಕಾರಣ ಯುಜಿಡಿ ಸಮಸ್ಯೆ ಎದುರಾಗಿದೆ. ಹಾಗಾಗಿ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಬೇಕು. ಉದ್ಯಾನ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ ಎಂಬ ದೂರು ಬಂದಿದೆ. ಈ ಬಗ್ಗೆ ಪರಿಶೀಲಿಸುವಂತೆ ಎಂಜಿನಿಯರ್‌ಗಳಿಗೆ ಮೇಯರ್ ನಿರ್ದೇಶನ ನೀಡಿದರು.

ಕೊರೊನಾ ಕಾರಣ ಅನುದಾನಗಳು ಬರುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಆದರೂ ಜನರಿಗೆ ಮೂಲ ಸೌಕರ್ಯ ಒದಗಿಸಲು ಒತ್ತು ನೀಡಲಾಗುವುದು ಎಂದು ಹೇಳಿದರು.

ಖಾದರ್ ನಗರ, ಬಂಡೇಪಾಳ್ಯ, ದೇವರಾಯಪಟ್ಟಣದಲ್ಲಿ ಯುಜಿಡಿ, ಚರಂಡಿ ಸಮಸ್ಯೆ ತೀವ್ರವಾಗಿದೆ. ಈ ಬಡಾವಣೆಗಳಲ್ಲಿ ಸಮರ್ಪಕ ಯೋಜನೆ ಮಾಡಿಲ್ಲದ ಕಾರಣ ಸಮಸ್ಯೆಗಳು ಇವೆ. ಈ ಸಮಸ್ಯೆ ನಿವಾರಣೆಗೆ ಶ್ರಮಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT