<p><strong>ತುಮಕೂರು: </strong>ನಗರದ ಕೆಲವು ವಾರ್ಡ್ಗಳಲ್ಲಿ ಮಂಗಗಳ ಹಾವಳಿ ಹೆಚ್ಚಿದ್ದು ಅವುಗಳ ಸೆರೆಗೆ ಪಾಲಿಕೆ ಮುಂದಾಗಿದೆ. ಮಂಗಗಳ ಹಾವಳಿ ಬಗ್ಗೆ ನಾಗರಿಕರು ಆಯಾ ವಾರ್ಡ್ ಸದಸ್ಯರಿಗೆ ದೂರು ನೀಡಿದ್ದರು. ಅಲ್ಲದೆ ಆಯುಕ್ತರಿಗೂ ಮಾಹಿತಿ ನೀಡಿದ್ದರು.</p>.<p>ಪಾಲಿಕೆ ಆಯುಕ್ತರ ನಿವಾಸವಿರುವ ಗಂಗೋತ್ರಿ ನಗರದ ಸುತ್ತಮುತ್ತ ಮಂಗಗಳ ಹಾವಳಿ ಹೆಚ್ಚಿತ್ತು. ಈ ಬಗ್ಗೆ ಆ ಪ್ರದೇಶದ ನಾಗರಿಕರು ಆಯುಕ್ತರಿಗೆ ದೂರು ನೀಡಿದ್ದರು. ಈ ನಡುವೆ ಒಮ್ಮೆ ಪಾಲಿಕೆ ಆಯುಕ್ತರ ಮನೆಯೊಳಗೆ ಮಂಗಗಳು ನುಗ್ಗಿದ್ದವು. ಮನೆಯೊಳಗಿನ ಸೋಫಾ ಮೇಲೆ ಕುಳಿತು ಟಿವಿ ರಿಮೇಕ್ ಹಿಡಿದಿತ್ತು ಎನ್ನುತ್ತಾರೆ ಆ ಪ್ರದೇಶದ ಜನರು. ಈ ಎಲ್ಲ ದೂರು, ದುಮ್ಮಾನಗಳ ಹಿನ್ನೆಲೆಯಲ್ಲಿ ಪಾಲಿಕೆ ಜು.25ರಿಂದ ಮಂಗಳನ್ನು ಸೆರೆ ಹಿಡಿಯುತ್ತಿದೆ.</p>.<p>27ನೇ ವಾರ್ಡ್ನ ಗಂಗ್ರೋತ್ರಿ ನಗರ, 26ನೇ ವಾರ್ಡ್ನ ಎಸ್ಐಟಿ ಮಹಿಳಾ ಹಾಸ್ಟೆಲ್ ಬಳಿ, ಎಸ್ಐಟಿ ಗೇಟ್ ಬಳಿ, 22ನೇ ವಾರ್ಡ್ನ ಕೆಲವು ಕಡೆಗಳಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸಲಾಗಿದೆ.</p>.<p>‘ನಾಗರಿಕರಿಂದ ಮಂಗಗಳ ಹಾವಳಿಯ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಆಂಧ್ರಪ್ರದೇಶದ ಮದನಪಲ್ಲಿಯ ಆರು ಜನರ ತಂಡವು ಕಾರ್ಯಾಚರಣೆ ನಡೆಸುತ್ತಿದೆ’ ಎಂದು ‘ಪ್ರಜಾವಾಣಿ’ಗೆ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ತಿಳಿಸಿದರು.</p>.<p>‘ಕೆಲವು ಸಮಯ ಮಂಗಗಳು ಸೆರೆ ಸಿಕ್ಕುವುದಿಲ್ಲ. ಹಿಡಿಯುತ್ತಾರೆ ಎನ್ನುವುದು ಗೊತ್ತಾದ ತಕ್ಷಣ ಪರಾರಿ ಆಗುತ್ತವೆ’ ಎಂದರು.</p>.<p>ಹಿಡಿದ ಮಂಗಗಳನ್ನು ಹಿರಿಯೂರು ತಾಲ್ಲೂಕಿನ ಅರಣ್ಯ ಪ್ರದೇಶ, ಸಾವನದುರ್ಗ ಹೀಗೆ ಬೇರೆ ಬೇರೆ ಕಡೆ ಅವುಗಳಿಗೆ ನೀರು ದೊರೆಯುವ ಪ್ರದೇಶಕ್ಕೆ ಬಿಡಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ನಗರದ ಕೆಲವು ವಾರ್ಡ್ಗಳಲ್ಲಿ ಮಂಗಗಳ ಹಾವಳಿ ಹೆಚ್ಚಿದ್ದು ಅವುಗಳ ಸೆರೆಗೆ ಪಾಲಿಕೆ ಮುಂದಾಗಿದೆ. ಮಂಗಗಳ ಹಾವಳಿ ಬಗ್ಗೆ ನಾಗರಿಕರು ಆಯಾ ವಾರ್ಡ್ ಸದಸ್ಯರಿಗೆ ದೂರು ನೀಡಿದ್ದರು. ಅಲ್ಲದೆ ಆಯುಕ್ತರಿಗೂ ಮಾಹಿತಿ ನೀಡಿದ್ದರು.</p>.<p>ಪಾಲಿಕೆ ಆಯುಕ್ತರ ನಿವಾಸವಿರುವ ಗಂಗೋತ್ರಿ ನಗರದ ಸುತ್ತಮುತ್ತ ಮಂಗಗಳ ಹಾವಳಿ ಹೆಚ್ಚಿತ್ತು. ಈ ಬಗ್ಗೆ ಆ ಪ್ರದೇಶದ ನಾಗರಿಕರು ಆಯುಕ್ತರಿಗೆ ದೂರು ನೀಡಿದ್ದರು. ಈ ನಡುವೆ ಒಮ್ಮೆ ಪಾಲಿಕೆ ಆಯುಕ್ತರ ಮನೆಯೊಳಗೆ ಮಂಗಗಳು ನುಗ್ಗಿದ್ದವು. ಮನೆಯೊಳಗಿನ ಸೋಫಾ ಮೇಲೆ ಕುಳಿತು ಟಿವಿ ರಿಮೇಕ್ ಹಿಡಿದಿತ್ತು ಎನ್ನುತ್ತಾರೆ ಆ ಪ್ರದೇಶದ ಜನರು. ಈ ಎಲ್ಲ ದೂರು, ದುಮ್ಮಾನಗಳ ಹಿನ್ನೆಲೆಯಲ್ಲಿ ಪಾಲಿಕೆ ಜು.25ರಿಂದ ಮಂಗಳನ್ನು ಸೆರೆ ಹಿಡಿಯುತ್ತಿದೆ.</p>.<p>27ನೇ ವಾರ್ಡ್ನ ಗಂಗ್ರೋತ್ರಿ ನಗರ, 26ನೇ ವಾರ್ಡ್ನ ಎಸ್ಐಟಿ ಮಹಿಳಾ ಹಾಸ್ಟೆಲ್ ಬಳಿ, ಎಸ್ಐಟಿ ಗೇಟ್ ಬಳಿ, 22ನೇ ವಾರ್ಡ್ನ ಕೆಲವು ಕಡೆಗಳಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸಲಾಗಿದೆ.</p>.<p>‘ನಾಗರಿಕರಿಂದ ಮಂಗಗಳ ಹಾವಳಿಯ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಆಂಧ್ರಪ್ರದೇಶದ ಮದನಪಲ್ಲಿಯ ಆರು ಜನರ ತಂಡವು ಕಾರ್ಯಾಚರಣೆ ನಡೆಸುತ್ತಿದೆ’ ಎಂದು ‘ಪ್ರಜಾವಾಣಿ’ಗೆ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ತಿಳಿಸಿದರು.</p>.<p>‘ಕೆಲವು ಸಮಯ ಮಂಗಗಳು ಸೆರೆ ಸಿಕ್ಕುವುದಿಲ್ಲ. ಹಿಡಿಯುತ್ತಾರೆ ಎನ್ನುವುದು ಗೊತ್ತಾದ ತಕ್ಷಣ ಪರಾರಿ ಆಗುತ್ತವೆ’ ಎಂದರು.</p>.<p>ಹಿಡಿದ ಮಂಗಗಳನ್ನು ಹಿರಿಯೂರು ತಾಲ್ಲೂಕಿನ ಅರಣ್ಯ ಪ್ರದೇಶ, ಸಾವನದುರ್ಗ ಹೀಗೆ ಬೇರೆ ಬೇರೆ ಕಡೆ ಅವುಗಳಿಗೆ ನೀರು ದೊರೆಯುವ ಪ್ರದೇಶಕ್ಕೆ ಬಿಡಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>