<p><strong>ತೋವಿನಕೆರೆ</strong>: ನೂರಾರು ಸ್ವಾಮೀಜಿಗಳು ಕನ್ನೇರಿ ಮಠದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ರೈತರ ಕಷ್ಟಗಳ ಪರಿಹಾರಕ್ಕೆ ‘ನೇಗಿಲ ಯೋಗಿ’ಗೆ ಸಹಕಾರ ನೀಡಲು ತೀರ್ಮಾನಿಸಲಾಗಿದೆ ಎಂದು ಸಿದ್ಧರಬೆಟ್ಟದ ರಂಭಾಪುರಿ ಮಠದ ಪೀಠಾದ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಸಿದ್ಧರಬೆಟ್ಟ ರಂಭಾಪುರಿ ಶಾಖಾ ಮಠದ ಅವರಣದಲ್ಲಿ ಸೋಮವಾರ ನಡೆದ ಬೆಳದಿಂಗಳ ಕೂಟದಲ್ಲಿ ಅವರು ಮಾತನಾಡಿದರು.</p>.<p>ಮಠಗಳಲ್ಲಿ ಗಾಣದ ಯಂತ್ರ ಹಾಕಿ ಶುದ್ಧ ಎಣ್ಣೆ ತೆಗೆಯುವುದು, ಸಾವಯವ ಮಳಿಗೆ ಸ್ಥಾಪಿಸಿ ರಾಸಾಯನಿಕ ರಹಿತ ಕೃಷಿ ಉತ್ಪನ್ನ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.</p>.<p>ಜಿಲ್ಲಾ ನಬಾರ್ಡ್ ಸಹಾಯಕ ಜನರಲ್ ಮ್ಯಾನೇಜರ್ ಕೀರ್ತಿ ಪ್ರಭ ಅವರು ‘ಕೃಷಿ ಉದ್ಯಮಿಯಾಗಿ ಮಹಿಳೆ’ ವಿಷಯದ ಬಗ್ಗೆ ಮಾತನಾಡಿ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾಭಿವೃದ್ಧಿಗೆ ನಬಾರ್ಡ್ ಮೂಲಕ ದೊರೆಯುವ ಸರ್ಕಾರದ ಯೋಜನೆಗಳ ವಿವರ ನೀಡಿದರು.</p>.<p>ಹೈನು ಉದ್ಯಮಿ ಮಣುವಿನಕುರಿಕೆ ಎ.ಎನ್.ರಾಜೇಶ್ವರಿ ದಂಪತಿಯನ್ನು ಸತ್ಕರಿಸಲಾಯಿತು.</p>.<p>ರಾಜೇಶ್ವರಿ ಮಾತನಾಡಿ, ಎರಡು ಹಸುಗಳಿಂದ ಪ್ರಾರಂಭವಾಗಿ ಈಗ 45ಕ್ಕೆ ಏರಿದ್ದು, ಯಶ್ವಸಿ ಹೈನುಗಾರಿಕೆ ಮಾರ್ಗಗಳ ಮಾಹಿತಿ ನೀಡಿದರು.</p>.<p>ಮಧುಗಿರಿ ಪುಟ್ಟಮ್ಮ, ಎಚ್.ಪಿ. ಪ್ರಶಾಂತ ಕುಮಾರ್, ರೇಖಾ ಗೌ.ರಾ.ರಾಮಮೂರ್ತಿ ಉಪಸ್ಥಿತರಿದ್ದರು.</p>.<p>ಮಣುವಿನಕುರಿಕೆ ಸವಿತಾ ನಾಗೇಶ್, ಜೋನಿಗರಹಳ್ಳಿ ಮಮತಾ, ತೋವಿನಕೆರೆ ಸ್ವರೂಪ್ ಮಂಜುನಾಥ, ಮಂಜಮ್ಮ, ಗೌರಗೊಂಡನಹಳ್ಳಿ ಪೂರ್ವಿಕ್ ಜಿ.ಆರ್. ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋವಿನಕೆರೆ</strong>: ನೂರಾರು ಸ್ವಾಮೀಜಿಗಳು ಕನ್ನೇರಿ ಮಠದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ರೈತರ ಕಷ್ಟಗಳ ಪರಿಹಾರಕ್ಕೆ ‘ನೇಗಿಲ ಯೋಗಿ’ಗೆ ಸಹಕಾರ ನೀಡಲು ತೀರ್ಮಾನಿಸಲಾಗಿದೆ ಎಂದು ಸಿದ್ಧರಬೆಟ್ಟದ ರಂಭಾಪುರಿ ಮಠದ ಪೀಠಾದ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಸಿದ್ಧರಬೆಟ್ಟ ರಂಭಾಪುರಿ ಶಾಖಾ ಮಠದ ಅವರಣದಲ್ಲಿ ಸೋಮವಾರ ನಡೆದ ಬೆಳದಿಂಗಳ ಕೂಟದಲ್ಲಿ ಅವರು ಮಾತನಾಡಿದರು.</p>.<p>ಮಠಗಳಲ್ಲಿ ಗಾಣದ ಯಂತ್ರ ಹಾಕಿ ಶುದ್ಧ ಎಣ್ಣೆ ತೆಗೆಯುವುದು, ಸಾವಯವ ಮಳಿಗೆ ಸ್ಥಾಪಿಸಿ ರಾಸಾಯನಿಕ ರಹಿತ ಕೃಷಿ ಉತ್ಪನ್ನ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.</p>.<p>ಜಿಲ್ಲಾ ನಬಾರ್ಡ್ ಸಹಾಯಕ ಜನರಲ್ ಮ್ಯಾನೇಜರ್ ಕೀರ್ತಿ ಪ್ರಭ ಅವರು ‘ಕೃಷಿ ಉದ್ಯಮಿಯಾಗಿ ಮಹಿಳೆ’ ವಿಷಯದ ಬಗ್ಗೆ ಮಾತನಾಡಿ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾಭಿವೃದ್ಧಿಗೆ ನಬಾರ್ಡ್ ಮೂಲಕ ದೊರೆಯುವ ಸರ್ಕಾರದ ಯೋಜನೆಗಳ ವಿವರ ನೀಡಿದರು.</p>.<p>ಹೈನು ಉದ್ಯಮಿ ಮಣುವಿನಕುರಿಕೆ ಎ.ಎನ್.ರಾಜೇಶ್ವರಿ ದಂಪತಿಯನ್ನು ಸತ್ಕರಿಸಲಾಯಿತು.</p>.<p>ರಾಜೇಶ್ವರಿ ಮಾತನಾಡಿ, ಎರಡು ಹಸುಗಳಿಂದ ಪ್ರಾರಂಭವಾಗಿ ಈಗ 45ಕ್ಕೆ ಏರಿದ್ದು, ಯಶ್ವಸಿ ಹೈನುಗಾರಿಕೆ ಮಾರ್ಗಗಳ ಮಾಹಿತಿ ನೀಡಿದರು.</p>.<p>ಮಧುಗಿರಿ ಪುಟ್ಟಮ್ಮ, ಎಚ್.ಪಿ. ಪ್ರಶಾಂತ ಕುಮಾರ್, ರೇಖಾ ಗೌ.ರಾ.ರಾಮಮೂರ್ತಿ ಉಪಸ್ಥಿತರಿದ್ದರು.</p>.<p>ಮಣುವಿನಕುರಿಕೆ ಸವಿತಾ ನಾಗೇಶ್, ಜೋನಿಗರಹಳ್ಳಿ ಮಮತಾ, ತೋವಿನಕೆರೆ ಸ್ವರೂಪ್ ಮಂಜುನಾಥ, ಮಂಜಮ್ಮ, ಗೌರಗೊಂಡನಹಳ್ಳಿ ಪೂರ್ವಿಕ್ ಜಿ.ಆರ್. ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>